ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ವಿಶ್ವ ಶಾಂತಿಗಾಗಿ ಜಗದ್ಗುರು XIVನೇ ಲಿಯೋರವರ ನೇತೃತ್ವದಲ್ಲಿ ಪ್ರಾರ್ಥನಾ ಜಾಗರಣೆ ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ವಿಶ್ವ ಶಾಂತಿಗಾಗಿ ಜಗದ್ಗುರು XIVನೇ ಲಿಯೋರವರ ನೇತೃತ್ವದಲ್ಲಿ ಪ್ರಾರ್ಥನಾ ಜಾಗರಣೆ  (ANSA)

ಶಾಂತಿಯನ್ನು ಆಯ್ಕೆಮಾಡುವ ಮೌನ ಬಹುಮತಕ್ಕೆ ಜಗದ್ಗುರು ಲಿಯೋರವರ ಮನವಿ

ಯುದ್ಧದ “ಹುಚ್ಚುತನ”ದ ವಿರುದ್ಧ ಸಾಮೂಹಿಕ ಬದ್ಧತೆಯಲ್ಲಿ ತೊಡಗಿಸಿಕೊಳ್ಳಲು ಜಗತ್ತಿನಾದ್ಯಂತ ಇರುವ ಕೋಟ್ಯಾಂತರ ಜನರನ್ನು ಜಗದ್ಗುರು XIVನೇ ಲಿಯೋರವರು ಕರೆ ನೀಡುತ್ತಾರೆ ಇತಿಹಾಸದ ಈ ಗಂಭೀರ ಘಟ್ಟದಲ್ಲಿ ಹಣ ಮತ್ತು ಅಧಿಕಾರದ ವಿಗ್ರಹಾರಾಧನೆಗೆ ಶರಣಾಗದವರನ್ನು ಅವರು ಉದ್ದೇಶಿಸಿದ್ದಾರೆ.

ವ್ಯಾಟಿಕನ್ ವರದಿ

ಅಧಿಕಾರದ ವಿಗ್ರಹಾರಾಧನೆಯಿಂದ ಅಷ್ಟೇ ಅಲ್ಲ, ನಿರಪರಾಧಿಗಳ ಹತ್ಯೆಗೆ ಧಾರ್ಮಿಕ ನ್ಯಾಯವನ್ನು ನೀಡುತ್ತಾ, ದೇವರನ್ನೇ ತಮ್ಮ ಪಾಳಯಕ್ಕೆ ಸೇರಿಸಿಕೊಂಡಿದ್ದೇವೆ ಎಂದು ಹೇಳಿಕೊಳ್ಳುವವರಿಂದ—ನಡೆಸಲ್ಪಡುವ ಹತ್ಯಾಕಾಂಡಗಳು ಮತ್ತು ಯುದ್ಧಗಳ ಎದುರು, ಜಗದ್ಗುರು XIVನೇ ಲಿಯೋರವರು ಶಾಂತಿಯನ್ನು ಬಯಸುವ, ಶಾಂತಿಯಲ್ಲಿ ನಂಬಿಕೆ ಇಡುವ, ಶಾಂತಿಗಾಗಿ ಪ್ರಾರ್ಥಿಸುವ ಹಾಗೂ ಅದನ್ನು ದಿನನಿತ್ಯ ಕಟ್ಟಿಕೊಳ್ಳುವ ಜಗತ್ತಿನ ಬಹುಪಾಲು ಜನತೆಗೆ ಮನವಿ ಮಾಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಯುದ್ಧಗಳು ಅಂತ್ಯಗೊಳ್ಳಲೆಂದು ಅವರು ಏಪ್ರಿಲ್ 11, 2026ರ ಶನಿವಾರ ಸಂಜೆ ಕರೆದಿದ್ದ ಪ್ರಾರ್ಥನಾ ಜಾಗರಣೆಯಲ್ಲಿ ಅವರು ಈ ಮಾತುಗಳನ್ನು ಹೇಳಿದರು.

ಈಗಾಗಲೇ ಏಪ್ರಿಲ್ 7, ಮಂಗಳವಾರ, ಕ್ಯಾಸ್ಟೆಲ್ ಗಾಂಡೋಲ್ಫೋದಲ್ಲಿ ಇದೇ ರೀತಿಯ ಒಂದು ಘಟನೆ ನಡೆದಿತ್ತು ಅಮೆರಿಕದ ಅಧ್ಯಕ್ಷರು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಂತೆ, ಇರಾನ್ ನಾಗರಿಕತೆಯನ್ನು ನಾಶಮಾಡುವ ಬೆದರಿಕೆಯ ಎದುರು, ಪೀಟರ್ ರವರ ಉತ್ತರಾಧಿಕಾರಿಯು ಆ ದೇಶದ ನಾಗರಿಕರಿಗೆ ಕಾಂಗ್ರೆಸ್ ಸದಸ್ಯರನ್ನು ಸಂಪರ್ಕಿಸಿ ಶಾಂತಿಗಾಗಿ ಕೇಳಿಕೊಳ್ಳಲು ಹಾಗೂ ಇರಾನ್‌ನ ಮೂಲಸೌಕರ್ಯಗಳ ಮೇಲೆ ನಡೆಯಲಿರುವ ಭಾರೀ ದಾಳಿಯನ್ನು ತಡೆಯಲು ಮನವಿ ಮಾಡಲು ಕರೆ ನೀಡಿದ್ದರು. ಇದೀಗ, ಜಗದ್ಗುರು ಸಂತ 23ನೇ ಜಾನ್ ರವರು ಪಾಚೆಮ್ ಇನ್ ಟೆರಿಸ್ ಎಂಬ ವಿಶ್ವಪತ್ರದ 63ನೇ ವಾರ್ಷಿಕೋತ್ಸವದ ದಿನದಂದು, ಅದೇ ಕರೆ ವಿಶ್ವವ್ಯಾಪಿಯಾಗಿ ಮಾರ್ಪಟ್ಟಿದ್ದು, ಇಂದು ಶಾಂತಿಯಲ್ಲಿ ನಂಬಿಕೆ ಇಡಲು ಆಯ್ಕೆಮಾಡುವ ಲಕ್ಷಾಂತರ ಹಾಗೂ ಕೋಟ್ಯಾಂತರ ಮಹಿಳೆಯರು ಮತ್ತು ಪುರುಷರು, ಯುವಕರು ಮತ್ತು ಹಿರಿಯರು ಎಂದು ಎಲ್ಲರಿಗೂ ಉದ್ದೇಶಿಸಲಾಗಿದೆ. ಅವರು ಯುದ್ಧದ ಹುಚ್ಚುತನದಿಂದ ಉಂಟಾದ ಗಾಯಗಳನ್ನು ಮರೆಮಾಡಿ, ಹಾನಿಯನ್ನು ಸರಿಪಡಿಸಲು ಶ್ರಮಿಸುತ್ತಿರುವವರು ಎಂಬವರನ್ನೂ ಉದ್ದೇಶಿಸಿದ್ದಾರೆ. ಗಾಜಾ, ಇರಾನ್, ಉಕ್ರೇನ್ ಹಾಗೂ ಜಗತ್ತಿನ ಅನೇಕ ಭಾಗಗಳಲ್ಲಿ ಬಾಂಬ್ ದಾಳಿಯಲ್ಲಿ ತಮ್ಮ ಸಮವಯಸ್ಕರನ್ನು ಕಳೆದುಕೊಂಡ ಮಕ್ಕಳ ಧ್ವನಿಗಳಿಗೆ ವಿಶೇಷ ಗಮನ ಹರಿಸಬೇಕೆಂದು ಜಗದ್ಗುರು ಲಿಯೋರವರು ಮನವಿ ಮಾಡಿದ್ದಾರೆ.

ಪಾಸ್ಖ ಹಬ್ಬದ ಆಚರಣೆಗೆ ಇನ್ನೂ ಒಂದು ವಾರಕ್ಕೂ ಕಡಿಮೆ ಸಮಯ ಬಾಕಿ ಇರುವಾಗ, ಹಾಗೂ ಪೂರ್ವದ ಪಾಸ್ಖ ಮುನ್ನಾದಿನದಲ್ಲಿ, ಶಾಂತಿಯ ರಾಜಕುಮಾರನ ನಿರಾಯುಧ ಜಯದ ಸ್ಮರಣೆಯ ಸಂದರ್ಭದಲ್ಲಿ, ರೋಮಿನ ಬಿಷಪ್ ಮಾನವಕುಲವು ಎದುರಿಸುತ್ತಿರುವ ಇತಿಹಾಸದ ಈ ಗಂಭೀರ ಕ್ಷಣವನ್ನು ಎದುರಿಸಲು ಮೌನ ಬಹುಮತದ ಪ್ರಾರ್ಥನೆಯ ಮೇಲೆ ತಮ್ಮ ಭರವಸೆಯನ್ನು ಇಟ್ಟಿದ್ದಾರೆ. ದುಷ್ಟತೆಯ ದೆವ್ವದ ಚಕ್ರವನ್ನು ಮುರಿಯಲು, ಅನೇಕ ಜನರ ಪ್ರಾರ್ಥನೆಗಳು ದೇವರ ಅನಂತ ಸಾಧ್ಯತೆಗಳೊಂದಿಗೆ ಒಂದಾಗಬೇಕು ಎಂದು ಅವರು ಮನವಿ ಮಾಡುತ್ತಾರೆ.

ಶಾಂತಿಯನ್ನು ತಮ್ಮ ಧರ್ಮೋಪದೇಶದ ಗುರುತು ಮಾಡಿಕೊಂಡಿರುವ ಜಗದ್ಗುರುಗಳ ಮಾತುಗಳು ಯುದ್ಧದ ಮೂಲದಲ್ಲಿರುವ ದೈವವಿರೋಧಿ ಸ್ವಭಾವವನ್ನು ಗುರುತಿಸುವಲ್ಲಿಯೂ, “ದೇವರು ನಮ್ಮೊಂದಿಗಿದ್ದಾನೆ” ಎಂಬ ಘೋಷಣೆಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳನ್ನು ಸ್ಪಷ್ಟವಾಗಿ ತಿರಸ್ಕರಿಸುವಲ್ಲಿಯೂ ಯಾವುದೇ ಸಂಶಯವಿಲ್ಲದಂತೆ ಸ್ಪಷ್ಟವಾಗಿವೆ. ಇಲ್ಲ—ನಾಗರಿಕರನ್ನು ಹತ್ಯೆ ಮಾಡುವವರೊಂದಿಗೆ ದೇವರು ಇರಲಾರನು. ದೇವರು ದುಃಖಿಸುವವರೊಂದಿಗಿದ್ದಾನೆ, ಅವಶೇಷಗಳಡಿಯಲ್ಲಿ ಪ್ರಾಣ ಕಳೆದುಕೊಳ್ಳುವವರೊಂದಿಗಿದ್ದಾರೆ ಎಂದು ಹೇಳಿದರು.

ಜಗದ್ಗುರು XIVನೇ ಲಿಯೋರವರು ಬಳಸಿದ ಕೆಲವು ಅಭಿವ್ಯಕ್ತಿಗಳು ಗಮನಾರ್ಹವಾಗಿವೆ ಪ್ರಾರ್ಥನೆ ನಮ್ಮನ್ನು ಸುತ್ತುವರೆದಿರುವ, ಹೆಚ್ಚಾಗಿ ಅಸ್ಥಿರವಾಗುತ್ತಾ ಆಕ್ರಮಣಕಾರಿ ಆಗುತ್ತಿರುವ ಸರ್ವಶಕ್ತಿಯ ಭ್ರಮೆಯ ವಿರುದ್ಧದ ಕೋಟೆಗೋಡೆ ಎಂದು ಅವರು ಹೇಳುತ್ತಾರೆ. ಏಕೆಂದರೆ ಪ್ರಾರ್ಥಿಸುವವರು ತಮ್ಮ ಮಿತಿಗಳನ್ನು ಅರಿತಿರುತ್ತಾರೆ ಅವರು ಕೊಲ್ಲುವುದಿಲ್ಲ, ಬೆದರಿಸುವುದಿಲ್ಲ. ಇದಕ್ಕೆ ವಿರುದ್ಧವಾಗಿ, ಕೆಲವರು ತಮ್ಮನ್ನೇ ಹಾಗೂ ತಮ್ಮ ಅಧಿಕಾರವನ್ನೇ ಮೌನ, ಕುರುಡು, ಕಿವುಡ ವಿಗ್ರಹವನ್ನಾಗಿ ಮಾಡಿಕೊಂಡು, ಅದರ ಮುಂದೆ ಪ್ರತಿಯೊಂದು ಮೌಲ್ಯವನ್ನೂ ಬಲಿಕೊಟ್ಟು, ಇಡೀ ಜಗತ್ತೇ ಅದರ ಮುಂದೆ ಮಣಿಯಬೇಕೆಂದು ಒತ್ತಾಯಿಸುತ್ತಾರೆ.

ಈ ತುರ್ತು ಪ್ರಾರ್ಥನಾ ಆಹ್ವಾನವನ್ನು ಕೇವಲ ಆಧ್ಯಾತ್ಮಿಕ ಪಲಾಯನವೆಂದು ಪರಿಗಣಿಸುವುದು ತಪ್ಪಾಗುತ್ತದೆ. ಪೀಟರ್ ರವರ ಉತ್ತರಾಧಿಕಾರಿಯ ಚಿಂತನೆಯ ಮತ್ತೊಂದು ಭಾಗವೇ ಇದನ್ನು ಸ್ಪಷ್ಟಪಡಿಸುತ್ತದೆ. ಎಲ್ಲೆಡೆ ಶಾಂತಿ, ಸಂವಾದ ಹಾಗೂ ಸ್ನೇಹವನ್ನು ಕಟ್ಟುವ ಪ್ರತಿಯೊಬ್ಬರ ಜವಾಬ್ದಾರಿಯನ್ನು ನೆನಪಿಸಿದ ಬಳಿಕ, ಜಗದ್ಗುರು XIVನೇ ಲಿಯೋರವರು ಪ್ರೀತಿ, ಮಿತವ್ಯಯ ಮತ್ತು ಉತ್ತಮ ರಾಜಕಾರಣದಲ್ಲಿ ನಂಬಿಕೆ ಇಡಲು ಆಹ್ವಾನಿಸುತ್ತಾರೆ. ಸಂವಾದ ಮತ್ತು ಮಾತುಕತೆ ಎಂಬ ಪದಗಳನ್ನು ಅಸಂಬಂಧಿತವೆಂದು ಪರಿಗಣಿಸದೆ, ಬದಲಿಗೆ ಕೊನೆಗೂ ಯುದ್ಧ ವಿರಾಮ ಹಾಗೂ ನಂತರ ಶಾಶ್ವತ ಶಾಂತಿ ಒಪ್ಪಂದಗಳನ್ನು ಹುಡುಕುವ ರಾಜಕಾರಣವೇ ಅದು ಎಂದು ಹೇಳಿದರು.

11 ಏಪ್ರಿಲ್ 2026, 16:28