ಹುಡುಕಿ

ಜಗದ್ಗುರು XVI ನೇ ಬೆನೆಡಿಕ್ಟ್ ಜಗದ್ಗುರು XVI ನೇ ಬೆನೆಡಿಕ್ಟ್ 

ಜನರನ್ನು ಮುಕ್ತವಾಗಿ ಸ್ವಾಗತಿಸಿ ಅವರನ್ನು ಬಿಡುವ ರಾಟ್ಜಿಂಗರ್ ಮತ್ತು ಧರ್ಮ ಸಭೆ

"ಭವಿಷ್ಯದ ನಂಬಿಕೆ" ಎಂಬ ಪುಸ್ತಕದ ಒಂದು ಪ್ರವಚನದಲ್ಲಿ, ಆಗಿನ ಕಾರ್ಡಿನಲ್ ಜಗದ್ಗುರು XVI ನೇ ಬೆನೆಡಿಕ್ಟ್ (ಜೋಸೆಫ್ ರಾಟ್ಸಿಂಗರ್)ರವರು ಸಂತ ಮೋನಿಕಾರವರನ್ನು ತಮ್ಮ ಪುತ್ರ ಸಂತ ಅಗಸ್ಟೀನ್ ರವರು ಹೊಂದಿದ್ದ ಮನೋಭಾವದ ಮೂಲಕ ಧರ್ಮ ಸಭೆ ಸಮುದಾಯದ ಜೀವಂತ ಪ್ರತಿರೂಪವಾಗಿ ಚಿತ್ರಿಸುತ್ತಾರೆ. ಅವರು ಧರ್ಮ ಸಭೆಯನ್ನು ಜೀವನದ, ಸ್ವಾಗತದ ಮತ್ತು ಸ್ವಾತಂತ್ರ್ಯದ ಸ್ಥಳವಾಗಿ ವರ್ಣಿಸುತ್ತಾರೆ ಅಲ್ಲಿ ಪ್ರತಿಯೊಬ್ಬರ ಸ್ವಾತಂತ್ರ್ಯಕ್ಕೆ ಗೌರವ ನೀಡಲಾಗುತ್ತದೆ ಮತ್ತು ನಂಬಿಕೆಯನ್ನು ಎಂದಿಗೂ ಬಲವಂತವಾಗಿ ಹೇರುವುದಿಲ್ಲ.

ವ್ಯಾಟಿಕನ್ ವರದಿ

1981ರ ನವೆಂಬರ್ 29ರಂದು, ಮ್ಯೂನಿಕ್‌ನ ನ್ಯೂಪರ್ಲಾಖ್ ಪ್ರದೇಶದಲ್ಲಿರುವ ಸಂತ ಮೋನಿಕಾರವರಿಗೆ ಸಮರ್ಪಿತ  ದೇವಾಲಯದ ಅಭಿಷೇಕ ಸಂದರ್ಭದಲ್ಲಿ ಆಗಿನ ಕಾರ್ಡಿನಲ್ ಅರ್ಚ್‌ಬಿಷಪ್ ಜಗದ್ಗುರು XVI ನೇ ಬೆನೆಡಿಕ್ಟ್ (ಜೋಸೆಫ್ ರಾಟ್ಸಿಂಗರ್) ರವರು ನೀಡಿದ ಪ್ರವಚನದಲ್ಲಿ, ತಾಯಿಯಾದ ಮೋನಿಕಾರವರ ಧೈರ್ಯ ಮತ್ತು ಸಹನೆಯನ್ನು ಧರ್ಮ ಸಭೆಯ ಜೀವಂತ ರೂಪವಾಗಿ ಚಿತ್ರಿಸಿದರು. ತಮ್ಮ ಪುತ್ರ ಸಂತ ಅಗಸ್ಟೀನ್ ರವರು ತನ್ನದೇ ದಾರಿಯಲ್ಲಿ ನಡೆಯಲು ಅವಕಾಶ ನೀಡಿದ ಅವಳ ಮನೋಭಾವವು, ಧರ್ಮ ಸಭೆಯ ನಿಜಸ್ವರೂಪವನ್ನು ಅನಾವರಣಗೊಳಿಸುತ್ತದೆ ಎಂದು ಅವರು ವಿವರಿಸಿದರು.

ರಾಟ್ಸಿಂಗರ್ ರವರ ಮಾತಿನಲ್ಲಿ, ಆಗಸ್ಟಿನ್ ತಮ್ಮ ತಾಯಿಯಲ್ಲಿ ವ್ಯಕ್ತಿಯಾಗಿ ಇರುವ ಧರ್ಮ ಸಭೆಯನ್ನು ಅನುಭವಿಸಿದರು ಅದು ಕೇವಲ ಸಂಸ್ಥೆ, ಕಟ್ಟಡ ಅಥವಾ ವ್ಯವಸ್ಥೆಯಲ್ಲ ಬದಲಾಗಿ ಜೀವಂತ ಸಂಬಂಧದ ಸ್ಥಳ. ಅಗಸ್ಟಿನ್ ರವರ ತಾಯಿಯ ಬಗ್ಗೆ ಅವರು  ನನಗೆ ದೇಹದ ಜೀವನವನ್ನಷ್ಟೇ ಅಲ್ಲ, ಹೃದಯದ ಸ್ಥಳವನ್ನೂ ನೀಡಿದರು ಎಂದು ಬರೆದಿರುವುದನ್ನು ಅವರು ನೆನಪಿಸಿದರು. ಮಾನವನು ನಂಬಿಕೆ, ಪ್ರೀತಿ ಮತ್ತು ಭವಿಷ್ಯದತ್ತ ನಡೆಯಲು ಅರ್ಥವನ್ನು ನೀಡುವ ಸಂಬಂಧದ ವಾತಾವರಣವನ್ನು ಅಗತ್ಯವಿರುತ್ತಾನೆ ಎಂದು ರಾಟ್ಸಿಂಗರ್ ಹೇಳಿದರು.

ಈ ಜೀವನದ ಸ್ಥಳವು ಪರಿಪೂರ್ಣರ ಸಮುದಾಯವಾಗಿ ಜಗತ್ತಿನಿಂದ ದೂರ ಉಳಿಯುವ ಧರ್ಮ ಸಭೆಗಿಂತ ವಿಭಿನ್ನವಾಗಿದೆ. ಅದು ಪ್ರತಿಯೊಬ್ಬರ ಸ್ವಾತಂತ್ರ್ಯವನ್ನು ಗೌರವಿಸುವ, ಸಮಯ ಮತ್ತು ಬೆಳವಣಿಗೆಯನ್ನು ಸಹನೆಯಿಂದ ಕಾಯುವ ಸ್ವಾಗತಮುಖಿ ಧರ್ಮ ಸಭೆಯ ಚಿತ್ರಣವಾಗಿದೆ. ಮೋನಿಕಾ ತಮ್ಮ ಮಗನಿಗೆ ನಂಬಿಕೆಯನ್ನು ಹೇರದೆ, ಅವನಿಗೆ ತಪ್ಪು ಮಾಡುವ ಸ್ವಾತಂತ್ರ್ಯವನ್ನೂ ನೀಡಿದರು ಆದರೆ ಅವನನ್ನು ಎಂದಿಗೂ ಬಿಟ್ಟುಹೋಗಲಿಲ್ಲ. ಈ ಸಹನೆಯಲ್ಲಿಯೇ ಅವರು ನಂಬಿಕೆಯನ್ನು ಅವನಿಗೆ ಸಾರಿದರು.

ಈ ಚಿಂತನೆ ಪೋಷಕರಿಗೆ, ಶಿಕ್ಷಕರಿಗೆ ಮತ್ತು ಸುವಾರ್ತೆಯನ್ನು ಘೋಷಿಸುವ ಎಲ್ಲರಿಗೂ ಮಾರ್ಗದರ್ಶಕವಾಗಿದೆ. ಧರ್ಮ ಸಭೆ ಜೀವನ, ಸ್ವಾತಂತ್ರ್ಯ ಮತ್ತು ಭರವಸೆಯ ಸ್ಥಳವಾಗಿರಬೇಕು. ಅದು ವ್ಯಕ್ತಿಗಳಲ್ಲಿ ಜೀವಂತವಾಗಿರುವಾಗ ಮಾತ್ರ ಉಳಿಯಬಲ್ಲದು ಕೇವಲ ರಚನೆಗಳು ಅಥವಾ ಹುದ್ದೆಗಳ ಮೂಲಕವಲ್ಲ.

ರಾಟ್ಸಿಂಗರ್ ಹೇಳಿದರು: ಇಂದಿನ ಕಾಲದಲ್ಲಿ ಧರ್ಮಸಭೆ ಬಗ್ಗೆ ಅನುಮಾನಗಳು ಇರುವುದಕ್ಕೆ ಕಾರಣ, ನಾವು ಅದನ್ನು ವ್ಯಕ್ತಿಯಾಗಿ ಅನುಭವಿಸುವುದಿಲ್ಲ. ಆದರೆ ಧರ್ಮ ಸಭೆ ವ್ಯಕ್ತಿಗಳಲ್ಲಿ ಜೀವಂತವಾಗಿರುವಾಗ, ಅದು ನಮ್ಮ ತಾಯಿನಾಡಾಗಬಹುದು. ಪ್ರೀತಿಯಿಂದ ಆಳವಾದ ಗಾಯಗಳನ್ನು ಗುಣಪಡಿಸುವ, ಜೊತೆಯಾಗಿರುವ ಕ್ಷೇತ್ರ ಆಸ್ಪತ್ರೆಯಂತೆ ಧರ್ಮ ಸಭೆಯು ಮನೆಯಲ್ಲಿ ಇರುವ ಅನುಭವವನ್ನು ನೀಡಬೇಕು ಎಂದರು.

25 ಫೆಬ್ರವರಿ 2026, 17:29