ತಪಸ್ಸು ಕಾಲದ ಧ್ಯಾನ ಶಿಬಿರ: ‘ದೇವರ ಸಹಾಯ’ ಕುರಿತು ಬಿಷಪ್ ವಾರ್ಡನ್ ರವರ ಚಿಂತನೆ
ವ್ಯಾಟಿಕನ್ ವರದಿ
ಹದಿನೇಳನೆಯ ಶತಮಾನದ ಆ ಮಹಾನ್ ಕ್ರೈಸ್ತ ಶಿಕ್ಷಣಕಾರ್ತಿಯವರು ತಮ್ಮ ಸಹೋದರಿಯರಿಗೆ ಹೀಗೆ ಹೇಳುತ್ತಿದ್ದರಂತೆ: “ನೀವು ನಿಮ್ಮ ಶ್ರೇಷ್ಠ ಪ್ರಯತ್ನ ಮಾಡಿ; ದೇವರು ಸಹಾಯ ಮಾಡುವನು.ಎಂದು
ನಮ್ಮ ಸಂಕಟಗಳ ಮಧ್ಯೆ ದೇವರು ನಮಗೆ ಸಹಾಯ ಮಾಡಬಲ್ಲನು ಮತ್ತು ಸಹಾಯ ಮಾಡುವನೆಂಬ ಕಲ್ಪನೆ ಬೈಬಲ್ ನಂಬಿಕೆಯ ಮೂಲ ಸತ್ಯವಾಗಿದೆ. ಇದು ಅಬ್ರಹಾಮ್, ಇಸಾಕ್ ಮತ್ತು ಯಾಕೋಬರ ದೇವರನ್ನು ಕ್ರಿಸ್ತ ಯೇಸುವಿನಲ್ಲಿ ಕರುಣೆಯ ಮಾಂಸರೂಪ ತಾಳಿದ ದೇವರನ್ನು ತತ್ತ್ವಶಾಸ್ತ್ರದ ‘ಚಲನವಿಲ್ಲದ ಚಾಲಕ’ ಎಂಬ ಕಲ್ಪನೆಯಿಂದ ವಿಭಿನ್ನಗೊಳಿಸುತ್ತದೆ.
ಕೀರ್ತನೆ 90 ಈ ವಾಕ್ಯದಿಂದ ಆರಂಭವಾಗುತ್ತದೆ “ಅತ್ಯುನ್ನತನ ಸಹಾಯದಲ್ಲಿ ವಾಸಿಸುವವನು. ಬೆರ್ನಾರ್ಡ್ ರವರ ಪ್ರಕಾರ, ದೇವರ ಸಹಾಯವನ್ನು ವಾಸಸ್ಥಾನ ಎಂದು ಕರೆಯಬಹುದು ಏಕೆಂದರೆ ಅದು ನಾವು ಜೀವಿಸುವ, ಚಲಿಸುವ ಮತ್ತು ನಮ್ಮ ಅಸ್ತಿತ್ವವನ್ನು ಹೊಂದಿರುವ ಧಾರಕ ವಾಸ್ತವಿಕತೆಯಾಗಿದೆ. ದೇವರ ಸಹಾಯವು ಕೇವಲ ಸಂದರ್ಭೋಚಿತವಲ್ಲ ಅದು ತುರ್ತು ಸೇವೆಯಂತೆ ಅಲ್ಲ ಮನೆಗೆ ಬೆಂಕಿ ತಗುಲಿದಾಗ ಅಥವಾ ಯಾರಾದರೂ ವಾಹನದ ಅಪಘಾತಕ್ಕೊಳಗಾದಾಗ ಮಾತ್ರ ಕರೆ ಮಾಡುವ 999 ಸಂಖ್ಯೆಯಂತಲ್ಲ.
ಆದರೆ, ದೇವಭಕ್ತರು ಆಕಾಶದತ್ತ ಕೂಗಿ ಪ್ರಾರ್ಥಿಸಿದಾಗ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ದೊರಕದೆ, ತಮ್ಮದೇ ಧ್ವನಿಯ ನಿರ್ಜನ ಪ್ರತಿಧ್ವನಿಯನ್ನು ಮಾತ್ರ ಕೇಳುವ ಸಂದರ್ಭಗಳಲ್ಲಿ ಏನು ಮಾಡಬೇಕು?
ಇಂತಹ ಸಂಕಟದ ಶಾಸ್ತ್ರೀಯ ರೂಪ ಯೋಬನು. ಅವನ ಮಹತ್ತಾದ ಗ್ರಂಥವನ್ನು ಮೂರು ಭಾಗಗಳ ಸಂಗೀತಸಿಂಫನಿಯಂತೆ ಕಾಣಬಹುದು ಆಂತರಿಕ ವಿಲಾಪದಿಂದ ಆರಂಭವಾಗಿ ಭೀತಿಯ ವಿಶ್ಲೇಷಣೆಯ ಮೂಲಕ ಸಾಗುತ್ತಾ, ಸಂಪೂರ್ಣ ಅಚ್ಚರಿಯ ಕೃಪಾ ಅನುಭವದಲ್ಲಿ ಅಂತ್ಯಗೊಳ್ಳುತ್ತದೆ.
ಯೋಬನು ತನ್ನ ಸ್ನೇಹಿತರ ತಾರ್ಕಿಕ ಸಮರ್ಥನೆಗಳನ್ನು ಒಪ್ಪಿಕೊಳ್ಳುವುದಿಲ್ಲ. ದೇವರು ಅವನ ಜೀವನವನ್ನು ಲೆಕ್ಕಪತ್ರದಂತೆ ಲೆಕ್ಕ ಹಾಕುತ್ತಿರುವನು ಎಂದು ಅವನು ಊಹಿಸುವುದಿಲ್ಲ. ಸಹಾಯವಿಲ್ಲದವನಾಗಿದ್ದರೂ, ತನ್ನ ಕಷ್ಟಗಳ ಮಧ್ಯೆಯೇ ದೇವರ ಸಾನ್ನಿಧ್ಯವನ್ನು ಕಂಡುಕೊಳ್ಳಲು ಅವನು ದೃಢನಿಶ್ಚಯಗೊಂಡು, ಧೈರ್ಯವಾಗಿ ಕೂಗುತ್ತಾನೆ: ಇವನೇ ಅಲ್ಲದಿದ್ದರೆ, ಇನ್ನಾರು?ಎಂದು
ನಂಬಿಗಸ್ತರಾಗಿ ನಾವು ಕೆಲವೊಮ್ಮೆ ನಮ್ಮ ಧರ್ಮವನ್ನು ವಿಮಾ ಪಾಲಿಸಿಯಂತೆ ಪರಿಗಣಿಸಬಹುದು. ದೇವರ ಸಹಾಯದೊಳಗೆ ನಾವು ಸುರಕ್ಷಿತವಾಗಿದ್ದೇವೆ ಎಂದು ಭಾವಿಸಿ, ಅಪಾಯ ನಮ್ಮನ್ನು ತಲುಪುವುದಿಲ್ಲವೆಂದುಕೊಳ್ಳಬಹುದು. ಆದರೆ ಅಪಾಯ ಬಂದುಬಿಟ್ಟಾಗ ನಮ್ಮ ಜಗತ್ತೇ ಕುಸಿದಂತಾಗಬಹುದು. ನಾನು ಕಷ್ಟಗಳನ್ನು ಹೇಗೆ ಎದುರಿಸಬೇಕು? ಕಟ್ಟಿಕೊಂಡಿದ್ದ ರಕ್ಷಣಾ ಗೋಡೆಗಳು ಕುಸಿದಾಗ ಏನು ಮಾಡಬೇಕು? ನನ್ನ ದೇವರೊಡನೆಯ ಸಂಬಂಧವು ವ್ಯವಹಾರಮೂಲಕವಾಗಿದೆಯೇ ಕಷ್ಟಕಾಲದಲ್ಲಿ ಯೋಬನ ಕಠಿಣ ಮನಸ್ಸಿನ ಹೆಂಡತಿಯ ಸಲಹೆಯಂತೆ “ದೇವರನ್ನು ಶಪಿಸಿ ಸಾಯು” ಎಂದು ಮಾಡುವಂತೆಯೇ? ಅಥವಾ ನಾನು ಇನ್ನಷ್ಟು ಆಳವಾದ ಮಟ್ಟದಲ್ಲಿ ಬದುಕುತ್ತೇನೆಯೇ?
ನಾವು ಜಗತ್ತೆಂದು ಭಾವಿಸಿದ್ದ ಗೋಡೆಗಳನ್ನು ದೇವರು ಕೆಡವಿದ ನಂತರ, ಅವುಗಳೊಳಗೆ ನಾವು ನಿಜವಾಗಿ ಉಸಿರುಗಟ್ಟುತ್ತಿದ್ದೆವೆಂಬುದು ತಿಳಿಯಬಹುದು ಮತ್ತು ದೇವರು ಹೊಸ ಜಗತ್ತೊಂದು ಮೂಡಿಬರಲು ಅವಕಾಶ ಮಾಡಿಕೊಡುತ್ತಾನೆ.
ಪವಿತ್ರ ಬೆರ್ನಾರ್ಡ್ ಬಯಸಿದಂತೆ ದೇವರ ಸಹಾಯದೊಳಗೆ ಬದುಕುವುದು ಎಂದರೆ ಕೇವಲ ಭದ್ರತೆಗಳನ್ನು ಮಾರಾಟ ಮಾಡುವುದಲ್ಲ. ಅದು ವಿಲಾಪ ಮತ್ತು ಭೀತಿಯ ಹಾದಿಯ ಮೂಲಕ ಹಾದು ಹೋಗಿ, ಇನ್ನಷ್ಟು ಆಳವಾದ ಮಟ್ಟದಲ್ಲಿ ಕೃಪೆಯಿಂದ ಬದುಕುವುದಾಗಿದೆ.
ನಾರ್ವೆಯ ಟ್ರೋನ್ಹೈಮ್ನ ಬಿಷಪ್ ಎರಿಕ್ ವಾರ್ಡನ್ ರವರನ್ನು , ಜಗದ್ಗುರು XIVನೇ ಲಿಯೋರವರು ರೋಮ್ನಲ್ಲಿ ವಾಸಿಸುವ ಕಾರ್ಡಿನಲ್ಗಳು ಮತ್ತು ರೋಮನ್ ಧರ್ಮ ಪ್ರಾಂತ್ಯದ ವಿವಿಧ ಡಿಕಾಸ್ಟರಿಗಳ ಮುಖ್ಯಸ್ಥರಿಗಾಗಿ 2026ರ ಆಧ್ಯಾತ್ಮಿಕ ವ್ಯಾಯಾಮಗಳನ್ನು (ಫೆಬ್ರವರಿ 22ರಿಂದ 27ರವರೆಗೆ) ಬೋಧಿಸಲು ಆಹ್ವಾನಿಸಲಾಗಿತ್ತು.