ವ್ಯಾಟಿಕನ್‌ನಲ್ಲಿ ತಪಸ್ಸು ಕಾಲದ ಆಧ್ಯಾತ್ಮಿಕ ಧ್ಯಾನಗಳ ಪ್ರಾರಂಭ (22 ಫೆಬ್ರವರಿ 2026) ವ್ಯಾಟಿಕನ್‌ನಲ್ಲಿ ತಪಸ್ಸು ಕಾಲದ ಆಧ್ಯಾತ್ಮಿಕ ಧ್ಯಾನಗಳ ಪ್ರಾರಂಭ (22 ಫೆಬ್ರವರಿ 2026)  (ANSA)

ತಪಸ್ಸು ಕಾಲದ ಧ್ಯಾನಶಿಬಿರದ ಉಪದೇಶಕ ವ್ಯಾಟಿಕನ್‌ನಲ್ಲಿ ಆದ್ಯಾತ್ಮಿಕ ಅಭ್ಯಾಸಗಳನ್ನು ಆರಂಭಿಸಿದರು.

ಜಗದ್ಗುರು ಲಿಯೋರವರು, ರೋಮ್‌ನಲ್ಲಿ ವಾಸಿಸುವ ಕಾರ್ಡಿನಲ್‌ಗಳು ಮತ್ತು ವಿವಿಧ ಡಿಕಾಸ್ಟರಿಗಳ ಮುಖ್ಯಸ್ಥರಿಗಾಗಿ ಆಯೋಜಿಸಲಾದ ತಪಸ್ಸು ಕಾಲದ ಆತ್ಮೀಯ ಅಭ್ಯಾಸಗಳು ಭಾನುವಾರ ಮಧ್ಯಾಹ್ನ ಆರಂಭವಾದವು.“ತಪಸ್ಸು ಕಾಲಕ್ಕೆ ಪ್ರವೇಶಿಸುವುದು” ಎಂಬ ವಿಷಯದ ಮೇಲೆ ಎರಿಕ್ ವರ್ಡೆನ್ ರವರ ಧ್ಯಾನೋಪದೇಶದೊಂದಿಗೆ ಈ ಆತ್ಮೀಯ ಕಾರ್ಯಕ್ರಮಕ್ಕೆ ಶುಭಾರಂಭ ನೀಡಲಾಯಿತು.

ವ್ಯಾಟಿಕನ್ ವರದಿ

ವ್ಯಾಟಿಕನ್‌ನಲ್ಲಿ ತಪಸ್ಸು ಕಾಲದ ಆತ್ಮೀಯ ಅಭ್ಯಾಸಗಳು ಫೆಬ್ರವರಿ 22, ಭಾನುವಾರ ಸಂಜೆ 5 ಗಂಟೆಗೆ ಪೌಲಿನ್ ಚಾಪೆಲ್‌ನಲ್ಲಿ ಆರಂಭವಾದವು. ಈ ಕಾರ್ಯಕ್ರಮದಲ್ಲಿ ಜಗದ್ಗುರು XIVನೇ ಲಿಯೋರವರು, ರೋಮ್‌ನಲ್ಲಿ ವಾಸಿಸುವ ಕಾರ್ಡಿನಲ್‌ಗಳು ಹಾಗೂ ವಿವಿಧ ಡಿಕಾಸ್ಟರಿಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಈ ವರ್ಷದ ತಪಸ್ಸು ಕಾಲದ ಆತ್ಮೀಯ ಅಭ್ಯಾಸಗಳನ್ನು ಅಡಗಿದ ಮಹಿಮೆಯಿಂದ ಪ್ರಕಾಶಿತರಾಗುವುದುಎಂಬ ವಿಷಯದ ಮೇಲೆ ಎರಿಕ್ ವರ್ಡೆನ್ ರವರು ಬೋಧಿಸುತ್ತಿದ್ದಾರೆ. ಟ್ರಾಪ್ಪಿಸ್ಟ್ (ಕಠಿಣ ಆಚರಣೆಯ ಸಿಸ್ಟರ್ಸಿಯನ್) ಸಂಘಕ್ಕೆ ಸೇರಿದ ಅವರು 2019ರಿಂದ ನಾರ್ವೆಯ ಟ್ರೋಂಡ್‌ಹೈಮ್ ಧರ್ಮಪ್ರಾಂತ್ಯದ ಬಿಷಪ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಾನುವಾರ ಅವರು “ತಪಸ್ಸು ಕಾಲಕ್ಕೆ ಪ್ರವೇಶಿಸುವುದು” ಎಂಬ ವಿಷಯದ ಮೇಲೆ ತಮ್ಮ ಮೊದಲ ಧ್ಯಾನೋಪದೇಶವನ್ನು ನೀಡಿದರು.

ಫೆಬ್ರವರಿ 23ರಿಂದ 27ರವರೆಗೆ ಪ್ರತಿದಿನ ಎರಡು ಧ್ಯಾನೋಪದೇಶಗಳು ನಡೆಯಲಿವೆ  ಬೆಳಿಗ್ಗೆ 9 ಗಂಟೆಗೆ (ಮಧ್ಯಾಹ್ನ ಪ್ರಾರ್ಥನೆಗೆ ಮುನ್ನ) ಮತ್ತು ಸಂಜೆ 5 ಗಂಟೆಗೆ (ಪವಿತ್ರ ಬಲಿಪೂಜೆ ಆರಾಧನೆ ಹಾಗೂ ಸಂಜೆ ಪ್ರಾರ್ಥನೆಗಳೊಂದಿಗೆ). ಫೆಬ್ರವರಿ 26ರ ಸಂಜೆ ಕ್ಲೈರ್ವಾಕ್ಸ್‌ನ ಬರ್ನಾರ್ಡ್ ಕುರಿತು “ಆದರ್ಶವಾದಿ ಸಂತ ಬೆರ್ನಾರ್ಡ್” ಮತ್ತು “ವಾಸ್ತವವಾದಿ ಸಂತ ಬೆರ್ನಾರ್ಡ್” ಎಂಬ ಎರಡು ವಿಶೇಷ ಧ್ಯಾನಗಳು ನಡೆಯಲಿವೆ. ಇತರ ವಿಷಯಗಳಲ್ಲಿ ದೇವರ ಸಹಾಯ, ಸ್ವಾತಂತ್ರ್ಯವನ್ನು ಪಡೆಯುವುದು, ಸತ್ಯದ ಕಿರಣ, ನಾನು ಅವನನ್ನು ಮಹಿಮೆಪಡಿಸುವೆನು, ದೇವದೂತರು, ಮನನ, ಹಾಗೂ ಕೊನೆಯಲ್ಲಿ ನಂಬಿಕೆಯನ್ನು ಹಂಚಿಕೊಳ್ಳುವುದು ಎಂಬ ವಿಷಯಗಳು ಸೇರಿವೆ.

ಆತ್ಮೀಯ ಅಭ್ಯಾಸಗಳ ಆರಂಭದಲ್ಲಿ ಬಿಷಪ್ ವಾರ್ಡನ್ ತಪಸ್ಸು ಕಾಲವು ನಮ್ಮನ್ನು ಮೂಲಭೂತ ಸತ್ಯಗಳ ಎದುರು ನಿಲ್ಲಿಸುತ್ತದೆ ಎಂದು ಹೇಳಿದರು. ಇದು ಅನಾವಶ್ಯಕ ಸಂಗತಿಗಳಿಂದ ನಮ್ಮನ್ನು ದೂರವಿಟ್ಟು, ಆಂತರಿಕ ಶುದ್ಧೀಕರಣದ ಮಾರ್ಗದಲ್ಲಿ ನಡೆಸುತ್ತದೆ. ನಮ್ಮನ್ನು ಚಂಚಲಿತಗೊಳಿಸುವ ಹಲವಾರು ವಿಷಯಗಳನ್ನು ತಾತ್ಕಾಲಿಕವಾಗಿ ತ್ಯಜಿಸಿ, ಇಂದ್ರಿಯಗಳ ನಿಯಮಿತ ಉಪವಾಸವನ್ನು ಅಳವಡಿಸಿಕೊಳ್ಳಲು ಈ ಕಾಲವು ಕರೆಯುತ್ತದೆ ಎಂದು ಅವರು ಹೇಳಿದರು.

ಕ್ರೈಸ್ತರು ದುರ್ವ್ಯಸನಗಳು ಮತ್ತು ಹಾನಿಕರ ಆಸೆಗಳಿಗೆ ವಿರುದ್ಧವಾಗಿ ಹೋರಾಡಿ, ಶಾಂತಿಯ ಜನರಾಗಬೇಕು ಎಂದು ಬಿಷಪ್ ಒತ್ತಿ ಹೇಳಿದರು. ಕೊನೆಯಲ್ಲಿ ಅವರು ಕ್ಲೈರ್ವಾಕ್ಸ್‌ನ ಬರ್ನಾರ್ಡ್ ರವರನ್ನು ಮಾದರಿಯಾಗಿ ಉಲ್ಲೇಖಿಸಿ, ಕೃಪೆಯ ಮೂಲಕ ಬದುಕುತ್ತಾ ದುಷ್ಟತೆಯ ವಿರುದ್ಧ ಹೋರಾಡುವುದು, ಸತ್ಯವನ್ನು ಉಳಿಸುವುದು ಮತ್ತು ಸ್ವಾತಂತ್ರ್ಯದತ್ತ ಪ್ರಯಾಣಿಸುವುದು ಹೇಗೆ ಎಂಬುದನ್ನು ಅವರು ಕಲಿಸಿದರು ಎಂದು ಹೇಳಿದರು. ಅವರು ನಮಗೆ ಪ್ರೀತಿಯಿಂದ ಹಾಗೂ ಸ್ಪಷ್ಟ ಮನಸ್ಸಿನಿಂದ ಶಿಷ್ಯತ್ವದ ಜೀವನಕ್ಕೆ ಕರೆಯುತ್ತಾರೆ, ಎಂದು ಬಿಷಪ್ ವಾರ್ಡನ್ ರವರು ಸಮಾಪ್ತಿಗೊಳಿಸಿದರು.

22 ಫೆಬ್ರವರಿ 2026, 20:03