ಫ್ರಾನ್ಸಿಸ್ಕನ್ ಪ್ರಾಂತೀಯ ಮುಖ್ಯಸ್ಥ: ಸಂತ ಫ್ರಾನ್ಸಿಸ್ ರವರ ಶಾಲೆಯು ಶಾಂತಿಯ ಸುವಾರ್ತೆಯನ್ನು ಕಲಿಸುತ್ತದೆ.
ವ್ಯಾಟಿಕನ್ ವರದಿ
ಗುರುವಾರ ಅಸ್ಸಿಸಿಗೆ ಆಗಮಿಸಿದ ಜಗದ್ಗುರು XIVನೇ ಲಿಯೋರವರನ್ನು ಉಂಬ್ರಿಯಾ ಮತ್ತು ಸಾರ್ಡೀನಿಯಾದ ಫ್ರೈಯರ್ಸ್ ಮೈನರ್ಗಳ ಪ್ರಾಂತೀಯ ಮುಖ್ಯಸ್ಥರಾದ ವಂ. ಸ್ವಾಮಿ ಮಾರ್ಕೊ ವಿಯಾನೆಲ್ಲಿರವರು ಸಾಂತಾ ಮರಿಯಾ ದೆಗ್ಲಿ ಅಂಜೆಲಿ ಚೌಕದಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು. ಪೊರ್ಚಿಯುಂಕೊಲಾ ಪುಣ್ಯಕ್ಷೇತ್ರವನ್ನು ಹೊಂದಿರುವ ಬಸಿಲಿಕಾದ ಮುಂಭಾಗದಲ್ಲಿ ನಡೆದ ಜಗದ್ಗುರುಗಳ ಯುವಜನರ ಭೇಟಿಯ ಆರಂಭದಲ್ಲಿ ಈ ಸ್ವಾಗತ ನೆರವೇರಿತು.
ಅಸ್ಸಿಸಿಯ ಬಡವರೆಂದು ಕರೆಯಲ್ಪಡುವ ಸಂತ ಫ್ರಾನ್ಸಿಸ್ ರವರು ಅಪಾರವಾಗಿ ಪ್ರೀತಿಸುತ್ತಿದ್ದ ಪೊರ್ಚಿಯುಂಕೊಲಾವನ್ನು ವಂ. ಸ್ವಾಮಿ ವಿಯಾನೆಲ್ಲಿ “ಚಿಕ್ಕದಾದರೂ ಪವಿತ್ರವಾದ ಸ್ಥಳ” ಎಂದು ವರ್ಣಿಸಿದರು. “ಸುವಾರ್ತೆಯು ಸರಳತೆ, ಸಹೋದರತ್ವ ಮತ್ತು ಶಾಂತಿಯ ಮೂಲಕ ನಿರಂತರವಾಗಿ ಪ್ರತಿಧ್ವನಿಸುತ್ತಿರುವ ಆಶೀರ್ವದಿತ ಭೂಮಿ”ಯ ಹೃದಯವನ್ನು ಈ ಸ್ಥಳವು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.
ನಿಷ್ಕ್ರಿಯ ಪ್ರೇಕ್ಷಕರಲ್ಲ, ಸಕ್ರಿಯವಾಗಿ ಪಾಲ್ಗೊಳ್ಳುವ ಯುವಜನರು
1226ರ ಅಕ್ಟೋಬರ್ 3ರಂದು ಇದೇ ಸ್ಥಳದಲ್ಲಿ ಅಸ್ಸಿಸಿಯ ಬಡವರೆಂದು ಕರೆಯಲ್ಪಡುವ ಸಂತ ಫ್ರಾನ್ಸಿಸ್ ಅವರು “ಸಹೋದರಿ ಮರಣವನ್ನು ಸ್ವಾಗತಿಸಿದ” ಘಟನೆಯ 800ನೇ ವರ್ಷಾಚರಣೆಯ ಸಂದರ್ಭದಲ್ಲಿ, ಇಂದು ಮುಕ್ತಾಯಗೊಳ್ಳುತ್ತಿರುವ “ಹೋಗಿ! ಫ್ರಾನ್ಸಿಸ್ಕನ್ ಯುವಜನರ ಸಭೆ” 2026” ಅನ್ನು ವಂ. ಸ್ವಾಮಿ ವಿಯಾನೆಲ್ಲಿ ವಿಶೇಷವಾಗಿ ಉಲ್ಲೇಖಿಸಿದರು. “ಯೂರೋಪಿನಾದ್ಯಂತದ ಸಾವಿರಾರು ಯುವಜನರು ಪೊರ್ಚಿಯುಂಕೊಲಾದ ಸುತ್ತಲೂ ಒಟ್ಟುಗೂಡಿ, ನಂಬಿಕೆ, ನಿರೀಕ್ಷೆ ಮತ್ತು ಸಹೋದರತ್ವದ ಪಯಣವನ್ನು ಪರಸ್ಪರ ಹಂಚಿಕೊಂಡಿದ್ದಾರೆ” ಎಂದು ಅವರು ಹೇಳಿದರು.
ಸುವಾರ್ತೆಯ ವಿಶ್ವಾಸಾರ್ಹ ಸಾಕ್ಷಿಗಳಾಗುವುದು
ಕೊನೆಯಲ್ಲಿ, ರೋಮ್ನ ಬಿಷಪ್ ಆಗಿರುವ ಜಗದ್ಗುರು XIVನೇ ಲಿಯೋರವರು ಉಪಸ್ಥಿತಿಗಾಗಿ ಪ್ರಾಂತೀಯ ಮುಖ್ಯಸ್ಥರು ಮತ್ತೊಮ್ಮೆ ಕೃತಜ್ಞತೆ ಸಲ್ಲಿಸಿದರು. ಅವರ ಭೇಟಿ “ನಮ್ಮನ್ನು ಸುವಾರ್ತೆಯ ವಿಶ್ವಾಸಾರ್ಹ ಸಾಕ್ಷಿಗಳನ್ನಾಗಿ ರೂಪಿಸುವ ಕಾರ್ಯದಲ್ಲಿ ನಮಗೆ ಪ್ರೋತ್ಸಾಹ ಮತ್ತು ಬೆಂಬಲದ ಸಂಕೇತವಾಗಿದೆ” ಎಂದು ಅವರು ಹೇಳಿದರು.
