Il Papa, istituzioni e societ� insieme per lavoro dignitoso

ಜಗದ್ಗುರು ಲಿಯೋರವರು: ಅಮೆರಿಕದ ಸ್ವಾತಂತ್ರ್ಯದ ಮನೋಭಾವ ಮತ್ತು ಎಲ್ಲರನ್ನೂ ಸ್ವಾಗತಿಸುವ ಗುಣ ನನಗೆ ಬಹಳ ಇಷ್ಟ.

ಜಗದ್ಗುರು ಲಿಯೋರವರು ಅಮೆರಿಕದ ಪ್ರಸಾರ ಮಾಧ್ಯಮ ಸಂಸ್ಥೆ ಎನ್ ಸಿ ಸಿಗೆ ಸಂದರ್ಶನ ನೀಡಿದ್ದು, ಅಮೆರಿಕ ಸಂಯುಕ್ತ ಸಂಸ್ಥಾನದ ಇತಿಹಾಸದಲ್ಲಿ ವಲಸೆಯ ಮಹತ್ವವನ್ನು ಒತ್ತಿಹೇಳಿದ್ದಾರೆ. ಜೊತೆಗೆ, ತಮ್ಮ ಜನ್ಮದೇಶವಾದ ಅಮೆರಿಕಕ್ಕೆ ಮುಂದಿನ ಒಂದೆರಡು ವರ್ಷಗಳಲ್ಲಿ ಭೇಟಿ ನೀಡುವ ಸಾಧ್ಯತೆಯ ಸುಳಿವನ್ನೂ ನೀಡಿದ್ದಾರೆ.

ವ್ಯಾಟಿಕನ್ ವರದಿ

ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿ ತಮ್ಮ ರಜಾಕಾಲವನ್ನು ಕಳೆದ ಬಳಿಕ, ಬುಧವಾರ ಸಂಜೆ ನಡೆದ ಶಾಂತಿ ಪ್ರಾರ್ಥನಾ ಕಾರ್ಯಕ್ರಮದ ನಂತರ ಜಗದ್ಗುರು XIVನೇ ಲಿಯೋರವರು ಅಮೆರಿಕದ ಪ್ರಸಾರ ಮಾಧ್ಯಮ ಸಂಸ್ಥೆ ಎನ್ ಸಿ ಸಿಗೆ ಸಂಕ್ಷಿಪ್ತ ಸಂದರ್ಶನ ನೀಡಿದರು. ವಿಶ್ವದ ವಿವಿಧ ಭಾಗಗಳಿಂದ ಬಂದ ಮಕ್ಕಳ ಗಾಯನದೊಂದಿಗೆ ಪ್ರಸಿದ್ಧ ಗಾಯಕ ಆಂದ್ರಿಯಾ ಬೊಚೆಲ್ಲಿರವರ ಸಂಗೀತವೂ ಈ ಶಾಂತಿ ಪ್ರಾರ್ಥನಾ ಕಾರ್ಯಕ್ರಮಕ್ಕೆ ಮೆರುಗು ನೀಡಿತ್ತು.

ಸಂದರ್ಶನದಲ್ಲಿ ಜಗದ್ಗುರುಗಳು, ಅಮೆರಿಕದ ಬಗ್ಗೆ ತಮಗಿರುವ ಪ್ರೀತಿ ಹಾಗೂ ವಲಸಿಗರನ್ನು ಸ್ವಾಗತಿಸುವ ಆ ದೇಶದ ಇತಿಹಾಸದ ಕುರಿತು ಮಾತನಾಡಿದರು.

ತಮ್ಮನ್ನು ಮೊದಲ “ಅಮೆರಿಕನ್ ಜಗದ್ಗುರು” ಎಂದು ಕರೆಯುವುದರ ಬಗ್ಗೆ ಕೇಳಿದಾಗ, ಜಗದ್ಗುರು ಲಿಯೋರವರು ತಮ್ಮನ್ನು “ಅಮೆರಿಕನ್ ಆಗಿರುವ ಜಗದ್ಗುರು” ಎಂದು ನೋಡುವುದಾಗಿ ಸ್ಪಷ್ಟಪಡಿಸಿದರು. ಇದರಿಂದ ಅಮೆರಿಕನ್ನರಾಗಿರುವುದರ ಮಹತ್ವವನ್ನು ತಾನು ಕಡಿಮೆ ಮಾಡುತ್ತಿಲ್ಲ ಎಂದು ಅವರು ಹೇಳಿದರು. “ನಾನು ಅಮೆರಿಕದಲ್ಲಿ ಜನಿಸಿದೆ. ನನ್ನ ಕುಟುಂಬ ಇನ್ನೂ ಅಮೆರಿಕದಲ್ಲಿದೆ. ನನಗೆ ಅಮೆರಿಕದ ಮೇಲೆ ಅಪಾರ ಪ್ರೀತಿಯಿದೆ,” ಎಂದು ಅವರು ಹೇಳಿದರು.

ಆದರೆ, ತಮ್ಮ ಧ್ಯೇಯವನ್ನು “ಸಾರ್ವತ್ರಿಕ ಧರ್ಮ ಸಭೆಯ ಕುರುಬನಾಗಿರುವುದು ಮತ್ತು ಇಡೀ ವಿಶ್ವದ ಜನರೊಂದಿಗೆ ಮಾತನಾಡಲು ಧ್ವನಿಯನ್ನೂ ಅವಕಾಶವನ್ನೂ ಹೊಂದಿರುವುದು” ಎಂಬ ಅತ್ಯಂತ ಮಹತ್ವದ ಆಯಾಮ ಹೊಂದಿರುವ ಕರೆಯಾಗಿ ತಾನು ಅರ್ಥಮಾಡಿಕೊಳ್ಳುವುದಾಗಿ ಜಗದ್ಗುರುಗಳು ಹೇಳಿದರು ಅದೇ ವೇಳೆ, ತಮಗೂ ಅಮೆರಿಕದ ಜನರಿಗೂ ಮೊದಲ ಅಮೆರಿಕನ್ ಜಗದ್ಗುರು ಎಂಬುದಕ್ಕೆ ವಿಶೇಷ ಮಹತ್ವವಿದೆ ಎಂಬುದನ್ನು ಅವರು ಒಪ್ಪಿಕೊಂಡರು.

ಅಮೆರಿಕದ ಬಗ್ಗೆ ತಮಗೆ ಇಷ್ಟವಾಗುವ ಸಂಗತಿಗಳ ಕುರಿತು ಮಾತನಾಡಿದ ಜಗದ್ಗುರುಗಳು, “ಅಮೆರಿಕ ಪ್ರತಿಪಾದಿಸುವ ಮೌಲ್ಯಗಳು, ಸ್ವಾತಂತ್ರ್ಯದ ಭಾವನೆ, ಅವಕಾಶದ ಭಾವನೆ ಹಾಗೂ ತಲೆತಲಾಂತರಗಳಿಂದ ವಿಶ್ವದ ವಿವಿಧ ಭಾಗಗಳಿಂದ ಜನರನ್ನು ಅಮೆರಿಕದ ಭಾಗವಾಗಲು ಆಹ್ವಾನಿಸಿರುವ ಮನೋಭಾವ”ವನ್ನು ಉಲ್ಲೇಖಿಸಿದರು. ತಮ್ಮ ಅಜ್ಜ-ಅಜ್ಜಿಯರೂ ಅಮೆರಿಕಕ್ಕೆ ವಲಸೆ ಬಂದವರಾಗಿದ್ದರು ಎಂದು ಅವರು ತಿಳಿಸಿದರು. ತಮ್ಮ ತಾಯಿಯ ಕುಟುಂಬದ ಇತಿಹಾಸವನ್ನು ಮತ್ತಷ್ಟು ಹಿಂದಕ್ಕೆ ನೆನಪಿಸಿಕೊಂಡ ಅವರು, ತಮ್ಮ ಕುಟುಂಬದಲ್ಲಿ ಗುಲಾಮರಾಗಿದ್ದವರೂ ಹಾಗೂ ಗುಲಾಮರನ್ನು ಹೊಂದಿದ್ದವರೂ ಇದ್ದರು ಎಂದು ಹೇಳಿದರು. ಇಂತಹ ಇತಿಹಾಸವು ಅಮೆರಿಕದ ಮಹತ್ತರ ಸಂಪತ್ತುಗಳಲ್ಲಿ ಒಂದನ್ನು ಅರ್ಥಮಾಡಿಕೊಳ್ಳಲು ತಮ್ಮ ಅನುಭವಕ್ಕೆ ನೆರವಾಗಿದೆ ಎಂದು ಅವರು ವಿವರಿಸಿದರು.

ಸಂದರ್ಶನದ ಕೊನೆಯಲ್ಲಿ, ಅಮೆರಿಕಕ್ಕೆ ಭೇಟಿ ನೀಡುವ ಯೋಜನೆ ಇದೆಯೇ ಎಂದು ಜಗದ್ಗುರುಗಳನ್ನು ಕೇಳಲಾಯಿತು. ಅದಕ್ಕೆ ಅವರು, “ಅವರು ನನ್ನನ್ನು ಅಲ್ಲಿ ನೋಡಲಿದ್ದಾರೆ. ಕಾಕತಾಳೀಯವಾಗಿ, ಇಂದು ನಾವು ಮುಂದಿನ ಒಂದೆರಡು ವರ್ಷಗಳ ಕಾರ್ಯಕ್ರಮಪಟ್ಟಿಯನ್ನು ನೋಡುತ್ತಿದ್ದೆವು. ಇನ್ನೂ ಯಾವುದೂ ಅಂತಿಮವಾಗಿ ನಿಗದಿಯಾಗಿಲ್ಲ, ಆದರೆ ಶೀಘ್ರದಲ್ಲೇ ಅಲ್ಲಿಗೆ ಹೋಗಲು ನಾನು ಖಂಡಿತವಾಗಿಯೂ ಆಶಿಸುತ್ತೇನೆ,” ಎಂದು ಹೇಳಿದರು.

ನಂತರ ಎನ್ ಸಿ ಸಿಯಂತೆಯೇ ಕಾಮ್‌ಕಾಸ್ಟ್ ಸಂಸ್ಥೆಯ ಒಡೆತನದಲ್ಲಿರುವ ಟೆಲೆಮುಂಡೋಗೆ ಸ್ಪ್ಯಾನಿಷ್ ಭಾಷೆಯಲ್ಲಿ ನೀಡಿದ ಮತ್ತೊಂದು ಸಂದರ್ಶನದಲ್ಲಿ, ವಿಶ್ವದ ವಿವಿಧ ಭಾಗಗಳಿಂದ ಬಂದ ಮಕ್ಕಳು ಒಟ್ಟಾಗಿ ಹಾಡಿದ ಶಾಂತಿ ಪ್ರಾರ್ಥನೆಯಲ್ಲಿ ತಾವು ಕಂಡ ಸೌಂದರ್ಯವನ್ನು ಜಗದ್ಗುರು ಲಿಯೋರವರು ಸ್ಮರಿಸಿದರು. “ಆ ಸೌಂದರ್ಯವು ನಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ, ಮಾನವರಾಗಿರುವುದರ ಶ್ರೀಮಂತಿಕೆಯನ್ನು ಮತ್ತು ನಾವೆಲ್ಲರೂ ದೇವರ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟಿದ್ದೇವೆ ಎಂಬ ಸತ್ಯವನ್ನು ಗುರುತಿಸಿದಾಗ ಸೃಷ್ಟಿಯಾಗಬಹುದಾದ—ಅಥವಾ ನಾವು ಭಾಗವಹಿಸಬಹುದಾದ—ಸೌಂದರ್ಯವನ್ನು ನೋಡುವಂತೆ ನಮ್ಮೆಲ್ಲರಿಗೂ ನೀಡಿದ ಆಹ್ವಾನವಾಗಿತ್ತು,” ಎಂದು ಅವರು ಹೇಳಿದರು.

ಯುದ್ಧ ಮತ್ತು ದ್ವೇಷದ ಬದಲಾಗಿ ಶಾಂತಿ ಮತ್ತು ಪ್ರೀತಿ ಏಕೆ ಇರಬಾರದು ಎಂದು ಮಕ್ಕಳು ಕೇಳಿದ ಪ್ರಶ್ನೆಯನ್ನೂ, ಅವರು ಸಲ್ಲಿಸಿದ ಶಾಂತಿಯ ಪ್ರಾರ್ಥನೆಗಳನ್ನೂ ಜಗದ್ಗುರುಗಳು ಸ್ಮರಿಸಿದರು. “ಮಾನವರಾಗಿರುವುದರಲ್ಲಿ, ನಾವೆಲ್ಲರೂ ಸಹೋದರ-ಸಹೋದರಿಯರಾಗಿರುವುದರಲ್ಲಿ ಅಡಗಿರುವ ಮೌಲ್ಯಗಳನ್ನು ಮತ್ತು ಸಂಪತ್ತನ್ನು ನಾವು ಮತ್ತೆ ಕಂಡುಕೊಳ್ಳಬೇಕು. ಶಾಂತಿಯನ್ನು ಪ್ರೀತಿಸುವ, ಶಾಂತಿಯನ್ನು ಹುಡುಕುವ ಮತ್ತು ನಮ್ಮ ಭಿನ್ನತೆಗಳ ನಡುವೆಯೂ ಪರಸ್ಪರರನ್ನು ಸ್ವೀಕರಿಸುವ ಸಮಾಜದ ನಿರ್ಮಾಣದಲ್ಲಿ ನಾವೆಲ್ಲರೂ ನಿಜವಾಗಿಯೂ ಪಾಲ್ಗೊಳ್ಳಬಹುದು ಎಂಬುದನ್ನು ಗುರುತಿಸಬೇಕು. ನಾವೆಲ್ಲರೂ ಶಾಂತಿಗಾಗಿ ಶ್ರಮಿಸಿದರೆ, ಸಂಘರ್ಷ ಮತ್ತು ದ್ವೇಷಕ್ಕೆ ಕಾರಣವಾಗುವ ಅನೇಕ ಪರಿಸ್ಥಿತಿಗಳನ್ನು ನಾವು ಜಯಿಸಬಹುದು,” ಎಂದು ಅವರು ಹೇಳಿದರು.

ಟೆಲೆಮುಂಡೋ ಸಂದರ್ಶನದ ಕೊನೆಯಲ್ಲಿ ಜಗದ್ಗುರು XIVನೇ ಲಿಯೋರವರು ವಲಸಿಗರಿಗೆ ವಿಶೇಷ ಸಂದೇಶ ನೀಡಿದರು: “ಭರವಸೆಯನ್ನು ಹೊಂದಿರಿ. ಖಂಡಿತವಾಗಿಯೂ, ಕ್ರಮಬದ್ಧವಾಗಿ ಮತ್ತು ಕಾನೂನುಬದ್ಧವಾಗಿ ಬದುಕುವ ಮಾರ್ಗಗಳನ್ನು ಹುಡುಕಿ,” ಎಂದು ಅವರು ಒತ್ತಾಯಿಸಿದರು. ಅಪರಾಧಗಳು ಮತ್ತು ಇತರ ರೀತಿಯ ಅನ್ಯಾಯಗಳಿಂದ ಜನರು ತೊಂದರೆಗೊಳಗಾಗಿರಬಹುದಾದ ಸಂದರ್ಭಗಳಿರಬಹುದು ಎಂಬುದನ್ನು ಒಪ್ಪಿಕೊಂಡ ಅವರು, “ಅಂತಹ ರೀತಿಯಲ್ಲಿ ಸಮಾಜವನ್ನು ನಿರ್ಮಿಸಲು ಸಾಧ್ಯವಿಲ್ಲ. ಆದ್ದರಿಂದ ನಾವು ಶಾಂತಿಯಿಂದ ಬದುಕುವುದನ್ನು ಕಲಿಯಬೇಕು. ಅದೇ ಸಮಯದಲ್ಲಿ, ನಮ್ಮೆಲ್ಲರಿಗೂ ಸದಾ ನೆರವಾಗುವ ಧೈರ್ಯ ಮತ್ತು ಭರವಸೆಯನ್ನು ಹೊಂದಿರಬೇಕು,” ಎಂದು ಕರೆ ನೀಡಿದರು.

30 ಜುಲೈ 2026, 17:22