ಹುಡುಕಿ

ಜಗದ್ಗುರು XIVನೇ ಲಿಯೋರವರು  ಇಕ್ವೇಟೋರಿಯಲ್ ಗಿನಿಯಾದ ಮಾಲಾಬೊದಲ್ಲಿ ಪವಿತ್ರ ಬಲಿ ಪೂಜೆಯನ್ನು ಆಚರಿಸುತ್ತಾರೆ. ಜಗದ್ಗುರು XIVನೇ ಲಿಯೋರವರು ಇಕ್ವೇಟೋರಿಯಲ್ ಗಿನಿಯಾದ ಮಾಲಾಬೊದಲ್ಲಿ ಪವಿತ್ರ ಬಲಿ ಪೂಜೆಯನ್ನು ಆಚರಿಸುತ್ತಾರೆ.  (ANSA)

ಜಗದ್ಗುರುಗಳು: ಪೇತ್ರನ ಉತ್ತರಾಧಿಕಾರಿಯಾಗಿ ನನ್ನ ಜೀವನ ಮತ್ತು ಸೇವೆಯನ್ನು ಆಫ್ರಿಕಾ ಸಮೃದ್ಧಗೊಳಿಸುತ್ತದೆ.

ಜಗದ್ಗುರು XIVನೇ ಲಿಯೋರವರು ಇಕ್ವೇಟೋರಿಯಲ್ ಗಿನಿಯಾಗೆ ವಿದಾಯ ಹೇಳಿ, ಅದರೊಂದಿಗೆ ಸಂಪೂರ್ಣ ಆಫ್ರಿಕಾಕ್ಕೂ ವಿದಾಯ ಕೋರುತ್ತಾರೆ ನಾಲ್ಕು ಆಫ್ರಿಕಾ ರಾಷ್ಟ್ರಗಳಿಗೆ ನಡೆದ 11 ದಿನಗಳ ಪ್ರೇಷಿತರ ಪ್ರಯಾಣದ ಅಂತಿಮ ಕಾರ್ಯಕ್ರಮವಾಗಿ ಮಾಲಾಬೊ ಕ್ರೀಡಾಂಗಣದಲ್ಲಿ ಪವಿತ್ರ ಬಲಿಪೂಜೆಯನ್ನು ಆಚರಿಸುತ್ತಾರೆ.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಇಕ್ವೇಟೋರಿಯಲ್ ಗಿನಿಯಾ ಸೇರಿದಂತೆ ನಾಲ್ಕು ಆಫ್ರಿಕಾ ರಾಷ್ಟ್ರಗಳಿಗೆ ಮಾಡಿದ ತಮ್ಮ ಪ್ರೇಷಿತರ ಪ್ರಯಾಣವನ್ನು ಬುಧವಾರ ಮಾಲಾಬೊದಲ್ಲಿ ನೀಡಿದ ಚಿಕ್ಕ ವಿದಾಯ ಭಾಷಣದೊಂದಿಗೆ ಸಮಾಪ್ತಿಗೊಳಿಸಿದರು ಈ ಮೂಲಕ ಖಂಡದ 11 ದಿನಗಳ ಭೇಟಿಗೆ ಅಂತ್ಯವಾಯಿತು.

ಮಾಲಾಬೊ ಕ್ರೀಡಾಂಗಣದಲ್ಲಿ ನಡೆದ ಪವಿತ್ರ ಬಲಿಪೂಜೆಯ ಅಂತ್ಯದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರುಗಳು, “ಈಗ ಹೊರಡುವ ಸಮಯ ಬಂದಿದೆ” ಎಂದು ಹೇಳಿ, ಈ ಪ್ರಯಾಣವನ್ನು ಕೈಗೊಳ್ಳುವ ಅವಕಾಶಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದರು.

ಅವರು ಮಹಾಧರ್ಮಾಧ್ಯಕ್ಷರು, ಬಿಷಪ್‌ಗಳು, ಯಾಜಕರು ಮತ್ತು ಸಮುದಾಯದ ಎಲ್ಲರನ್ನು ಧನ್ಯವಾದ ಮಾಡಿ, ಅವರನ್ನು “ಈ ಭೂಮಿಯಲ್ಲಿ ಪ್ರಯಾಣಿಸುವ ದೇವರ ಜನರು” ಎಂದು ವರ್ಣಿಸಿದರು, ಇಲ್ಲಿ ಸುವಾರ್ತೆಯ ಸಾನ್ನಿಧ್ಯಕ್ಕೆ 170 ವರ್ಷಗಳ ಇತಿಹಾಸವಿದೆ. “ಕ್ರಿಸ್ತನು ಇಕ್ವೇಟೋರಿಯಲ್ ಗಿನಿಯಾದ ಬೆಳಕು, ಮತ್ತು ನೀವು ಭೂಮಿಯ ಉಪ್ಪು ಹಾಗೂ ಲೋಕದ ಬೆಳಕು” ಎಂದು ಅವರು ಹೇಳಿದರು.

ಜಗದ್ಗುರುಗಳು ದೇಶದ ನಾಗರಿಕ ಅಧಿಕಾರಿಗಳಿಗೆ ಹಾಗೂ ಈ ಭೇಟಿಯ ವ್ಯವಸ್ಥೆ ಮತ್ತು ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಆಫ್ರಿಕಾದಲ್ಲಿ ಕಳೆದ ಸಮಯವನ್ನು ಸ್ಮರಿಸುತ್ತಾ, ಜಗದ್ಗುರು XIVನೇ ಲಿಯೋರವರು ವಿಶ್ವಾಸ, ಭರವಸೆ ಮತ್ತು ಪ್ರೀತಿಯ ಅಳತೆಯಾಗದ ಧನವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ಹೇಳಿದರು ಈ ಧನವು ಭೇಟಿಗಳು, ಸಾಕ್ಷ್ಯಗಳು ಮತ್ತು ಅನುಭವಗಳಿಂದ ರೂಪುಗೊಂಡಿದೆ.

“ಈ ಧನವು ಸಂತೋಷಕರವೂ ದುಃಖಕರವೂ ಆದ ಕಥೆಗಳು, ಮುಖಗಳು ಮತ್ತು ಸಾಕ್ಷ್ಯಗಳನ್ನು ಒಳಗೊಂಡಿದೆ ಅವು ಪೇತ್ರನ ಉತ್ತರಾಧಿಕಾರಿಯಾಗಿ ನನ್ನ ಜೀವನ ಮತ್ತು ಸೇವೆಯನ್ನು ಬಹಳವಾಗಿ ಸಮೃದ್ಧಗೊಳಿಸಲಿವೆ” ಎಂದು ಅವರು ಹೇಳಿದರು.

ಜಗದ್ಗುರುಗಳು ಆಫ್ರಿಕಾದ ಧರ್ಮ ಸಭೆಯ ಜೀವನದಲ್ಲಿನ ಪಾತ್ರವನ್ನು ಉಲ್ಲೇಖಿಸಿ, ಕ್ರೈಸ್ತ ಧರ್ಮದ ಪ್ರಾರಂಭಿಕ ಶತಮಾನಗಳಂತೆ ಈ ಖಂಡವು ವಿಶ್ವಾಸಿಗಳ ಪವಿತ್ರತೆ ಮತ್ತು ಮಿಷನರಿ ಸ್ವಭಾವಕ್ಕೆ ಕೊಡುಗೆ ನೀಡಲು ಕರೆಯಲ್ಪಟ್ಟಿದೆ ಎಂದು ಹೇಳಿದರು.

ಕೊನೆಯಲ್ಲಿ, ಅವರು ಇಕ್ವೇಟೋರಿಯಲ್ ಗಿನಿಯಾದ ಜನರನ್ನು ಮತ್ತು ಸಂಪೂರ್ಣ ಆಫ್ರಿಕಾವನ್ನು ಕನ್ಯಾ ಮರಿಯಮ್ಮನವರ ಮಧ್ಯಸ್ಥಿಕೆಗೆ ಒಪ್ಪಿಸಿ, ಖಂಡದ ಕುಟುಂಬಗಳು, ಸಮುದಾಯಗಳು ಮತ್ತು ರಾಷ್ಟ್ರಗಳ ಮೇಲೆ ಅವರ ರಕ್ಷಣೆಯನ್ನು ಕೋರಿದರು.

23 ಏಪ್ರಿಲ್ 2026, 18:47