ಹುಡುಕಿ

Pope Leo XIV leads weekly general audience

ವ್ಯಾಟಿಕನಿನ ಮಕ್ಕಳ ಆಸ್ಪತ್ರೆಯ ರೋಗಿಗಳು ಜಗದ್ಗುರು ಲಿಯೋರವರಿಗಾಗಿ ಚಿತ್ರಗಳನ್ನು ರಚಿಸುತ್ತಾರೆ.

ಅಲ್ಜೀರಿಯಾದತ್ತ ಸಾಗುತ್ತಿದ್ದ ಜಗದ್ಗುರುಗಳ ವಿಮಾನದಲ್ಲಿ, ರೋಮಿನ ಬಾಲಯೇಸುವಿನ ಆಸ್ಪತ್ರೆಯ ಯುವ ರೋಗಿಗಳಿಂದ ಬಂದ ಚಿತ್ರವನ್ನು ಪತ್ರಕರ್ತರು ಜಗದ್ಗುರು ಲಿಯೋರವರಿಗೆ ಸಲ್ಲಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರ ನಾಲ್ಕು ಆಫ್ರಿಕಾ ರಾಷ್ಟ್ರಗಳಿಗೆ ನಡೆದ ಪ್ರೇಷಿತರ ಪ್ರವಾಸವು ಏಪ್ರಿಲ್ 13ರ ಸೋಮವಾರ ಜಗದ್ಗುರುಗಳು ವಿಮಾನದಲ್ಲಿ ಬಣ್ಣಗಳ ಸಂಭ್ರಮದೊಂದಿಗೆ ಆರಂಭವಾಯಿತು.

ಸಾಮಾನ್ಯವಾಗಿ ನಡೆಯುವ ಶುಭಾಶಯ ವಿನಿಮಯದ ವೇಳೆ, ಸಂವಹನ ದಿಕಾಸ್ಟರಿಯ ಪತ್ರಕರ್ತರು ರೋಮಿನ ಬಾಲಯೇಸು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಂದ ರಚಿಸಲಾದ ಒಂದು ಚಿತ್ರವನ್ನು ಜಗದ್ಗುರುಗಳಿಗೆ ಸಲ್ಲಿಸಿದರು.

ಆ ಚಿತ್ರದಲ್ಲಿ, ಕಣ್ಣಕಟ್ಟು ಧರಿಸಿರುವ ಜಗದ್ಗುರುಗಳು “ವಾಂಜೆಲೋ” (ಸುವಾರ್ತೆ) ಎಂದು ಬರೆಯಲ್ಪಟ್ಟ ಬ್ಯಾಗ್‌ನ್ನು ಹೊತ್ತುಕೊಂಡು ಮಕ್ಕಳೊಂದಿಗೆ ಪ್ರಯಾಣಕ್ಕೆ ಹೊರಟಿರುವಂತೆ ಚಿತ್ರಿಸಲಾಗಿದೆ.

ಆ ಚಿತ್ರದಲ್ಲಿ ಮಕ್ಕಳು ಕಟ್ಟಡದ ಬ್ಲಾಕ್‌ಗಳನ್ನು ಇಡುತ್ತಿರುವುದು ಕಾಣಿಸುತ್ತದೆ, ಇದರಿಂದ ಅವರನ್ನು ಶಾಂತಿಯ ನಿರ್ಮಾತೃಗಳಾಗಿ ತೋರಿಸಲಾಗಿದೆ. ಇದು ಸ್ಪಂದನಾತ್ಮಕ ಸಂದೇಶವಾಗಿದ್ದು, ಯುವ ರೋಗಿಗಳು ಜಗದ್ಗುರುಗಳ ಅಲ್ಜೀರಿಯಾ, ಕ್ಯಾಮರೂನ್, ಆಂಗೋಲಾ ಮತ್ತು ಇಕ್ವಟೋರಿಯಲ್ ಗಿನಿ ಪ್ರವಾಸಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಲು ಬಯಸಿದರು.

ವ್ಯಾಟಿಕನ್ ಪತ್ರಕರ್ತರು ಈ ಚಿತ್ರದ ಸಂಕೇತಾರ್ಥ ಮತ್ತು ಶಾಂತಿಯ ಸಂದೇಶವನ್ನು ವಿವರಿಸಿದರು, ವಿಶ್ವದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಸಂಘರ್ಷಗಳು ಮಕ್ಕಳಿಗೆ ಅಪಾಯವನ್ನು ಉಂಟುಮಾಡುತ್ತಿರುವ ಈ ಸಂದರ್ಭದಲ್ಲಿ.

ಇದಕ್ಕೆ ಪ್ರತಿಯಾಗಿ, ಜಗದ್ಗುರು ಲಿಯೋರವರು ನಗುಮುಖದಿಂದ “ತುಂಬಾ ಧನ್ಯವಾದಗಳು” ಎಂದು ಹೇಳಿದರು.

ಈ ಯುದ್ಧಕಾಲದಲ್ಲಿ ಬಾಲಯೇಸು ಆಸ್ಪತ್ರೆಯ ವಿಶಾಲ ಸೇವೆ ಚೆನ್ನಾಗಿ ಪರಿಚಿತವಾಗಿದೆ ರಷ್ಯಾ ಉಕ್ರೇನ್ ಮೇಲೆ ಮೊದಲ ಬಾಂಬ್ ದಾಳಿ ನಡೆಸಿದ ನಂತರದಿಂದ, ಈ ಆಸ್ಪತ್ರೆ 2,000ಕ್ಕೂ ಹೆಚ್ಚು ಉಕ್ರೇನ್ ರೋಗಿಗಳನ್ನು ತನ್ನ ವಾರ್ಡ್‌ಗಳಲ್ಲಿ ಸ್ವಾಗತಿಸಿದೆ.

ಇತ್ತೀಚಿನ ವರ್ಷಗಳಲ್ಲಿ, ಗಾಜಾ ಪ್ರದೇಶದಿಂದ ಮತ್ತೂ 30 ರೋಗಿಗಳನ್ನು ವಿವಿಧ ವಿಭಾಗಗಳಲ್ಲಿ ಸೇರಿಸಲಾಗಿದೆ ಇವರಲ್ಲಿ ಕೆಲವರಿಗೆ ಅತ್ಯಂತ ಸಂಕೀರ್ಣವಾದ ವೈದ್ಯಕೀಯ ಚಿಕಿತ್ಸೆ ಅಗತ್ಯವಿದೆ.

ಈ ಚಿತ್ರವನ್ನು ಆಸ್ಪತ್ರೆಯ ಆಟದ ಕೊಠಡಿಯಲ್ಲಿ ರಚಿಸಲಾಯಿತು ಅದು ಪ್ರತಿದಿನ ಮಕ್ಕಳೂ ದೊಡ್ಡವರೂ ಸೇರಿಕೊಳ್ಳುವ, ಭೇಟಿಯಾಗುವ ಮತ್ತು ಪರಸ್ಪರ ಸಂವಹನ ನಡೆಸುವ ಸ್ಥಳವಾಗಿದೆ. ಚಿಕಿತ್ಸೆ ಪಡೆಯುತ್ತಿರುವ ಯುವಕರು ಮತ್ತು ತಮ್ಮ ಮಕ್ಕಳನ್ನು ನೋಡಿಕೊಳ್ಳುವ ಪೋಷಕರು ಅಲ್ಲಿಗೆ ಬರುತ್ತಾರೆ. ವಿಭಿನ್ನ ಕ್ರೈಸ್ತ ಸಮುದಾಯದವರು, ಮುಸ್ಲಿಮರು ಮತ್ತು ಇತರ ಧರ್ಮದ ಜನರೂ ಅಲ್ಲಿ ಒಂದಾಗುತ್ತಾರೆ.

ಈ ಆಟದ ಕೊಠಡಿಯಲ್ಲಿ, ರೋಗಿಗಳ ಸಹೋದರರು ಮತ್ತು ಸಹೋದರಿಯರನ್ನು ಒಳಗೊಂಡಂತೆ ಮಕ್ಕಳು ಆಟವಾಡಬಹುದು, ಮಾತನಾಡಬಹುದು ಮತ್ತು ವಿಶ್ರಾಂತಿ ಪಡೆಯಬಹುದು. ವೃತ್ತಿಪರ ಶಿಕ್ಷಕರ ಸಹಾಯದಿಂದ, ಶಾಂತಿ ಎಂಬ ವಿಷಯದ ಸುತ್ತಮುತ್ತ ರೂಪುಗೊಂಡ ವಿವಿಧ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳಲ್ಲಿ ಅವರು ಭಾಗವಹಿಸುತ್ತಾರೆ.

ದ್ವೇಷ ಮತ್ತು ಹಿಂಸೆಯಿಂದ ಗುರುತಿಸಲ್ಪಟ್ಟ ಈ ಯುಗದಲ್ಲಿ, ಹೊಸ ಪೀಳಿಗೆಯಲ್ಲಿ ಶಾಂತಿಯ ನಿರ್ಮಾತೃಗಳಾಗುವ ಆಸೆಯನ್ನು ಬೆಳೆಸುವುದು ಅತ್ಯಂತ ಮುಖ್ಯವೆಂದು ಜಗದ್ಗುರು ಲಿಯೋರವರು ಪುನಃ ಪುನಃ ಹೇಳಿದ್ದಾರೆ.

“ನಾವು ಶಾಂತಿಯ ನಿರ್ಮಾತೃಗಳು, ನಿಮ್ಮೊಂದಿಗಿದ್ದೇವೆ, ಜಗದ್ಗುರು ಲಿಯೋ! ಎಂದು ಮಕ್ಕಳು ಜಗದ್ಗುರುಳಿಗಾಗಿ ಮಾಡಿದ ಚಿತ್ರದಲ್ಲಿ ಬರೆದಿದ್ದಾರೆ. ಜೊತೆಗೆ, ಅವರು ಇನ್ನೂ ಕೆಲವು ಚಿತ್ರಗಳು ಮತ್ತು ಸಂದೇಶಗಳನ್ನು ಸೇರಿಸಿದ್ದಾರೆ—ಅದರಲ್ಲೊಂದು ಮಕ್ಕಳಿಗೂ ದೊಡ್ಡವರಿಗೂ ಉದ್ದೇಶಿಸಿ “ಜಗಳ ಮಾಡಬೇಡಿ” ಎಂದು ಮನವಿ ಮಾಡುತ್ತದೆ.

13 ಏಪ್ರಿಲ್ 2026, 17:42