ಹುಡುಕಿ

Copertina-Todos_Todos_Todos_Ita.jpg

“ಎಲ್ಲರೂ, ಎಲ್ಲರೂ, ಎಲ್ಲರೂ!”

ಧರ್ಮ ಸಭೆ ಜಗದ್ಗುರು ಫ್ರಾನ್ಸಿಸ್ ರವರ ನಿಧನದ ಮೊದಲ ವಾರ್ಷಿಕೋತ್ಸವವನ್ನು ಸ್ಮರಿಸುವ ಸಂದರ್ಭದಲ್ಲಿ, ವ್ಯಾಟಿಕನ್ ನ್ಯೂಸ್ ಅರ್ಜೆಂಟಿನಾದ ಜಗದ್ಗುರುಗಳ ಜೀವನ ಮತ್ತು ಪರಂಪರೆಯನ್ನು ಹಿಂದಿರುಗಿ ನೋಡುವ ಹೊಸ ಡಾಕ್ಯುಮೆಂಟರಿಯನ್ನು ಬಿಡುಗಡೆ ಮಾಡಿದೆ.

ವ್ಯಾಟಿಕನ್ ವರದಿ

"ಕರುಣೆಯನ್ನು ಪಡೆದಿರುವ ನಾವು, ಈಗ ಕರುಣಾಳುಗಳಾಗೋಣ.” — ಜಗದ್ಗುರುಗಳ ಹೃದಯವನ್ನೂ ಅವರ ಅಧಿಕಾರ ಕಥೆಯನ್ನೂ ಸಂಕೇತಿಸುವ ಏಳು ಪದಗಳು. ಇದಕ್ಕೆ ಜೊತೆಯಾಗಿ, “ಬಡವರಾಗಿರುವ ಮತ್ತು ಬಡವರಿಗಾಗಿ ಇರುವ ಧರ್ಮ ಸಭೆ ನನಗೆ ಎಷ್ಟು ಇಷ್ಟ!” ಎಂಬುದು ಅವರ ಆಕಾಂಕ್ಷೆಯಾಗಿತ್ತು.

ಜಗದ್ಗುರು ಫ್ರಾನ್ಸಿಸ್ ರವರ ನಿಧನದ ಒಂದು ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ, ವ್ಯಾಟಿಕನ್ ನ್ಯೂಸ್, ವ್ಯಾಟಿಕನ್ ರೇಡಿಯೋ ಮತ್ತು ಎಲ್'ಒಸ್ಸೆರ್ವಟೋರ್ ರೊಮಾನೋ “ಎಲ್ಲರೂ, ಎಲ್ಲರೂ, ಎಲ್ಲರೂ!”ಎಂಬ ಶೀರ್ಷಿಕೆಯ 27 ನಿಮಿಷಗಳ ಡಾಕ್ಯುಮೆಂಟರಿಯಲ್ಲಿ ಅವರ ಅಧಿಕಾರಾವಧಿಯ ಅತ್ಯಂತ ಮಹತ್ವದ ಕ್ಷಣಗಳನ್ನು ಹೈಲೈಟ್ ಮಾಡಿವೆ.

ಇದು ಜಗದ್ಗುರುಗಳ ಮತ್ತೊಂದು ಪ್ರತೀಕಾತ್ಮಕ ಅಭಿವ್ಯಕ್ತಿಯಾಗಿದ್ದು, ಅಂಚಿನಲ್ಲಿರುವ ಜನರತ್ತ ಅವರ ಸಮೀಪತೆಯನ್ನು ಹಾಗೂ “ತುಂಡು ತುಂಡಾಗಿ ನಡೆಯುವ ಜಾಗತಿಕ ಯುದ್ಧ”ದಿಂದ ಗಾಯಗೊಂಡಿರುವ ಜಗತ್ತಿನಲ್ಲಿ ಶಾಂತಿಗಾಗಿ ಅವರ ನಿರಂತರ ಮನವಿಗಳನ್ನು ವ್ಯಕ್ತಪಡಿಸುತ್ತದೆ.

“ಎಲ್ಲರೂ, ಎಲ್ಲರೂ, ಎಲ್ಲರೂ!” ಎಂಬ ಈ ಡಾಕ್ಯುಮೆಂಟರಿ ಇಟಾಲಿಯನ್, ಸ್ಪ್ಯಾನಿಷ್ ಮತ್ತು ಇಂಗ್ಲಿಷ್ ಉಪಶೀರ್ಷಿಕೆಗಳೊಂದಿಗೆ ವ್ಯಾಟಿಕನ್ ನ್ಯೂಸ್ ವೇದಿಕೆಗಳಲ್ಲಿ ಲಭ್ಯವಿದ್ದು, ಜಾರ್ಜ್ ಮಾರಿಯೋ ಬರ್ಗೋಗ್ಲಿಯೊರವರ ಅಧಿಕಾರವಧಿಗೆ ಗುರುತಾಗಿದ್ದ ಧರ್ಮಾಧ್ಯಕ್ಷೀಯ ದೃಷ್ಟಿಯ ಸಾರಾಂಶವನ್ನು ನೀಡುವ ದೃಶ್ಯ ಕಥನದ ಮಾರ್ಗದರ್ಶಕ ತಂತಿಯಾಗಿದೆ.

ಆರ್ಕೈವ್ ದೃಶ್ಯಗಳು ಮತ್ತು ಚಿತ್ರಗಳ ಮೂಲಕ, ಈ ಡಾಕ್ಯುಮೆಂಟರಿ “ಮುಂದೆ ಸಾಗುವ” ಧರ್ಮ ಸಭೆಯನ್ನು ತೋರಿಸುತ್ತದೆ ಸಂವಾದ ನಡೆಸಬಲ್ಲದು ಮತ್ತು ಇತಿಹಾಸದ ಗಾಯಗಳ ಮಧ್ಯೆಯೇ ಸಕ್ರಿಯವಾಗಿ ಇರುವ ಧರ್ಮ ಸಭೆ.

ಕರುಣೆಯ ಕೇಂದ್ರತೆಯಿಂದ ಹಿಡಿದು ವ್ಯಕ್ತಿಗತ ಭೇಟಿಗಳ ನಿರ್ಮಾಣದವರೆಗೆ, ಜಗದ್ಗುರು ಫ್ರಾನ್ಸಿಸ್ ರವರು ಪೇತ್ರನ ಕುರ್ಚಿಯ ಮೇಲೆ ಕಳೆದ ವರ್ಷಗಳು, ಸುವಾರ್ತೆಯನ್ನು ಸ್ಪಷ್ಟ ಮತ್ತು ಎಲ್ಲರೂ ಅರ್ಥಮಾಡಿಕೊಳ್ಳಬಹುದಾದ ಕ್ರಿಯೆಗಳ ಮೂಲಕ ಅನುವಾದಿಸಲು ಯತ್ನಿಸಿದ ಧರ್ಮ ಸಭೆ ಯಾತ್ರೆಯಾಗಿ ಕಾಣಿಸುತ್ತವೆ.

ಇದು ಕೇವಲ ಸ್ಮರಣೆಯಲ್ಲ ಇದು ಜೀವಂತ ನೆನಪು—ಅವರ ನಿಧನದ ಒಂದು ವರ್ಷದ ನಂತರವೂ ಇಂದಿನ ಧರ್ಮ ಸಭೆ ಮತ್ತು ಜಗತ್ತನ್ನು ಪ್ರಶ್ನಿಸುತ್ತಲೇ ಇರುವ ಒಂದು ದೃಷ್ಟಿಯಾಗಿದೆ.

21 ಏಪ್ರಿಲ್ 2026, 17:34