EGUINEA-VATICAN-DIPLOMACY

“ಇಕ್ವೇಟೋರಿಯಲ್ ಗಿನಿಯಾದಲ್ಲಿ ಜಗದ್ಗುರುಗಳು: ಕ್ರಿಸ್ತನು ನಂಬಿಕೆ ಮತ್ತು ಯುಕ್ತಿಯ ನಡುವಿನ ಸೌಹಾರ್ದವನ್ನು ಪ್ರಕಟಿಸುತ್ತಾರೆ.”

ಇಕ್ವೇಟೋರಿಯಲ್ ಗಿನಿಯಾದ ಮಲಾಬೊ ನಗರದಲ್ಲಿರುವ ರಾಷ್ಟ್ರೀಯ ವಿಶ್ವವಿದ್ಯಾಲಯದ ಲಿಯೋನ್ XIV ಕ್ಯಾಂಪಸ್‌ನಲ್ಲಿ ಸಂಸ್ಕೃತಿ ಕ್ಷೇತ್ರದವರೊಂದಿಗೆ ನಡೆದ ಭೇಟಿಯಲ್ಲಿ, ಜಗದ್ಗುರು ಲಿಯೋರವರು ನಂಬಿಕೆ ಮತ್ತು ಯುಕ್ತಿ ನಡುವಿನ ಪರಿಪೂರ್ಣ ಪರಸ್ಪರಪೂರಕತೆಯನ್ನು ಪುನರುಚ್ಚರಿಸಿದರು ಮತ್ತು ಕ್ರಿಸ್ತನನ್ನು ಬೌದ್ಧಿಕ ಪ್ರಯತ್ನಗಳ ಎದುರು ಧಾರ್ಮಿಕ ತಪ್ಪಿಸಿಕೊಳ್ಳುವ ಮಾರ್ಗವಾಗಿ ಕಡಿಮೆ ಮಾಡುವ ಪ್ರವೃತ್ತಿಯನ್ನು ವಿಮರ್ಶಿಸಿದರು.

ವ್ಯಾಟಿಕನ್ ವರದಿ

ಬೌದ್ಧಿಕ ಪ್ರಯತ್ನಗಳ ಎದುರು ಕ್ರಿಸ್ತನು ಧಾರ್ಮಿಕ ತಪ್ಪಿಸಿಕೊಳ್ಳುವ ಮಾರ್ಗವಾಗಿ ಕಾಣಿಸಿಕೊಳ್ಳುವುದಿಲ್ಲ ನಂಬಿಕೆ ಯುಕ್ತಿ ಮುಗಿಯುವಲ್ಲಿ ಆರಂಭವಾಗುತ್ತದೆ ಎಂಬಂತೆ ಅಲ್ಲ. ಇದಕ್ಕೆ ವಿರುದ್ಧವಾಗಿ, ಆತನಲ್ಲಿ ಸತ್ಯ, ಯುಕ್ತಿ ಮತ್ತು ಸ್ವಾತಂತ್ರ್ಯದ ಆಳವಾದ ಸೌಹಾರ್ದವು ಪ್ರಕಟವಾಗುತ್ತದೆ.

ಜಗದ್ಗುರು XIVನೇ ಲಿಯೋರವರು 2026 ಏಪ್ರಿಲ್ 21ರಂದು ಇಕ್ವೇಟೋರಿಯಲ್ ಗಿನಿಯಾದ ಮಲಾಬೊ ನಗರದಲ್ಲಿರುವ ರಾಷ್ಟ್ರೀಯ ವಿಶ್ವವಿದ್ಯಾಲಯದ ಲಿಯೋನ್ XIV ಕ್ಯಾಂಪಸ್‌ನಲ್ಲಿ ಸಂಸ್ಕೃತಿ ಕ್ಷೇತ್ರದವರೊಂದಿಗೆ ನಡೆದ ಭೇಟಿಯಲ್ಲಿ ಈ ವಿಷಯವನ್ನು ಒತ್ತಿ ಹೇಳಿದರು.

ಅವರು ತಮ್ಮ ಹೆಸರಿನಲ್ಲಿ ಸ್ಥಾಪಿಸಲಾದ ಇಕ್ವೇಟೋರಿಯಲ್ ಗಿನಿಯಾದ ರಾಷ್ಟ್ರೀಯ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಉದ್ಘಾಟನೆಯನ್ನು ಗುರುತಿಸಿ, ಈ ಸ್ನೇಹಪೂರ್ವಕ ಗೌರವಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. ಆದರೆ ಇಂತಹ ನಿರ್ಧಾರವು ಗೌರವಿಸಲ್ಪಡುವ ವ್ಯಕ್ತಿಯನ್ನು ಮೀರಿ ಹೋಗುತ್ತದೆ ಇದು ನಾವು ಎಲ್ಲರೂ ಇತರರಿಗೆ ಹಂಚಲು ಬಯಸುವ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಒತ್ತಿ ಹೇಳಿದರು.

ವಿಶ್ವವಿದ್ಯಾಲಯದ ಕ್ಯಾಂಪಸ್ ಉದ್ಘಾಟನೆ ಕೇವಲ ಆಡಳಿತಾತ್ಮಕ ಕ್ರಮವಲ್ಲ ಅದು “ಮಾನವನ ಮೇಲೆ ಇರುವ ನಂಬಿಕೆಯ ಕಾರ್ಯ, ಹೊಸ ತಲೆಮಾರುಗಳ ರೂಪಿಕರಣದ ಮೇಲೆ ಮುಂದುವರೆಯುವ ಹೂಡಿಕೆಗೆ ನೀಡುವ ದೃಢೀಕರಣ, ಮತ್ತು ಸತ್ಯವನ್ನು ಹುಡುಕುವ ಹಾಗೂ ಜ್ಞಾನವನ್ನು ಸಾಮಾನ್ಯ ಹಿತಕ್ಕಾಗಿ ಬಳಸುವ—ಬಹಳ ಕಠಿಣವಾದರೂ ಅತ್ಯುನ್ನತವಾದ ಕಾರ್ಯಕ್ಕೆ ನೀಡುವ ಬೆಂಬಲವಾಗಿದೆ.

ಅದರಿಂದ ಭರವಸೆ, ಭೇಟಿಯಾಗುವಿಕೆ ಮತ್ತು ಪ್ರಗತಿಯ ಒಂದು ಸ್ಥಳ ತೆರೆಯಲ್ಪಡುತ್ತದೆ ಎಂದು ಅವರು ಹೇಳಿದರು. ಈ ಹಿನ್ನೆಲೆಯಲ್ಲಿ, ಇಕ್ವೇಟೋರಿಯಲ್ ಗಿನಿಯಾದ ಜನರಿಗೆ ರಾಷ್ಟ್ರೀಯ ಮರವಾದ ‘ಸೀಬಾ’ಗೆ ಇರುವ ಮಹತ್ವವನ್ನು ಉಲ್ಲೇಖಿಸಿ, ವಿಶ್ವವಿದ್ಯಾಲಯದ ಧ್ಯೇಯವನ್ನು ವಿವರಿಸಲು ಮರದ ರೂಪಕವನ್ನು ಬಳಸಿದರು.

ಆಳವಾದ ಬೇರುಗಳು ಮತ್ತು ಸತ್ಯದ ನಿರಂತರ ಹುಡುಕಾಟ

ಜಗದ್ಗುರುಗಳು ಹೇಳಿದರು, ಒಂದು ಮರವು ಆಳವಾದ ಬೇರುಗಳನ್ನು ಬಿಡುತ್ತದೆ ಮತ್ತು ಸಹನೆಯೊಂದಿಗೆ ನಿಧಾನವಾಗಿ ಎತ್ತರಕ್ಕೆ ಏರುತ್ತದೆ ಅದು ತನಗಾಗಿ ಅಲ್ಲ, ಫಲವತ್ತತೆಯ ಪ್ರತೀಕವಾಗಿರುತ್ತದೆ.

ಅದೇ ರೀತಿ, ವಿಶ್ವವಿದ್ಯಾಲಯವು ಗಂಭೀರ ಅಧ್ಯಯನದಲ್ಲಿ, ಜನರ ಜೀವಂತ ಸ್ಮರಣೆಯಲ್ಲಿ ಮತ್ತು ಸತ್ಯದ ನಿರಂತರ ಹುಡುಕಾಟದಲ್ಲಿ ಬಲವಾಗಿ ಬೇರುಬಿಡಬೇಕು ಎಂದು ಅವರು ಸೂಚಿಸಿದರು.

ಮಾನವ ಇತಿಹಾಸವನ್ನು ಬೈಬಲ್‌ನ ಕೆಲವು ಮರಗಳ ಪ್ರತೀಕಗಳ ಮೂಲಕವೂ ಓದಬಹುದು ಎಂದು ಅವರು ಹೇಳಿದರು. ಕ್ರೈಸ್ತ ಪರಂಪರೆ ಮತ್ತೊಂದು ಮರವನ್ನು-ಶಿಲುಬೆಯ ಮರವನ್ನು ಮಾನವ ಬುದ್ಧಿಯ ನಿರಾಕರಣೆಯಾಗಿ ಅಲ್ಲ, ಅದರ ವಿಮೋಚನೆಯ ಸಂಕೇತವಾಗಿ ನೋಡುತ್ತದೆ ಎಂದು ಅವರು ವಿವರಿಸಿದರು.

ಆದಿಕಾಂಡದಲ್ಲಿ ಸತ್ಯ ಮತ್ತು ಒಳ್ಳೆಯತನದಿಂದ ಬೇರ್ಪಟ್ಟ ಜ್ಞಾನವನ್ನು ಹುಡುಕುವ ಪ್ರಲೋಭನವನ್ನು ನೋಡಿದರೆ, ಅವರು ಹೇಳಿದರು, “ಶಿಲುಬೆಯು ನಾವು ಬಹಿರಂಗಗೊಂಡ ಸತ್ಯವನ್ನು ಯೇಸು ಕ್ರಿಸ್ತನನ್ನು—ಕಾಣುತ್ತೇವೆ. ಆತನು ತನ್ನ ಇಚ್ಛೆಯನ್ನು ಹೇರಿಕೊಳ್ಳುವುದಿಲ್ಲ ಬದಲಾಗಿ ಪ್ರೀತಿಯ ಮೂಲಕ ತನ್ನನ್ನು ಅರ್ಪಿಸುತ್ತಾರೆ ಮತ್ತು ನಾವು ಆರಂಭದಲ್ಲೇ ಹೊಂದಿದ್ದ ಗೌರವಕ್ಕೆ ನಮ್ಮನ್ನು ಏರಿಸುತ್ತಾರೆ.”

ಶಿಲುಬೆಯ ಬಳಿ, ಮಾನವನಿಗೆ “ತನ್ನ ಜ್ಞಾನಾಸೆಯನ್ನು ಚೇತರಿಸಿಕೊಳ್ಳಲು ಅವಕಾಶ ನೀಡಲು ಸತ್ಯವನ್ನು ನಿರ್ಮಿಸಲ್ಪಟ್ಟದ್ದಾಗಿಯೂ, ನಿಯಂತ್ರಿಸಲ್ಪಟ್ಟದ್ದಾಗಿಯೂ ಅಥವಾ ಬಹುಮಾನವಾಗಿ ಹಿಡಿದಿಟ್ಟುಕೊಳ್ಳುವ ವಸ್ತುವಾಗಿಯೂ ಅಲ್ಲ, ವಿನಮ್ರತೆಯಿಂದ ಸ್ವೀಕರಿಸಬೇಕಾದ ಮತ್ತು ಹೊಣೆಗಾರಿಕೆಯಿಂದ ಸೇವಿಸಬೇಕಾದ ವಾಸ್ತವಿಕತೆಯಾಗಿ ಮರುಶೋಧಿಸಲು” ಆಹ್ವಾನ ನೀಡಲಾಗುತ್ತದೆ ಎಂದು ಅವರು ಹೇಳಿದರು.

ನಂಬಿಕೆ ಮತ್ತು ಯುಕ್ತಿಯ ಸೌಹಾರ್ದ

ಈ ಕಾರಣದಿಂದ, ಕ್ರೈಸ್ತ ದೃಷ್ಟಿಕೋನದಿಂದ ನೋಡಿದರೆ, ಕ್ರಿಸ್ತನು ಬೌದ್ಧಿಕ ಪ್ರಯತ್ನಗಳ ಎದುರು ಧಾರ್ಮಿಕ ತಪ್ಪಿಸಿಕೊಳ್ಳುವ ಮಾರ್ಗವಾಗಿ ಕಾಣಿಸುವುದಿಲ್ಲ ನಂಬಿಕೆ ಯುಕ್ತಿ ಮುಗಿದಲ್ಲಿ ಆರಂಭವಾಗುತ್ತದೆ ಎಂಬಂತೆ ಅಲ್ಲ.

ಇದಕ್ಕೆ ವಿರುದ್ಧವಾಗಿ, ಆತನಲ್ಲಿ ಸತ್ಯ, ಯುಕ್ತಿ ಮತ್ತು ಸ್ವಾತಂತ್ರ್ಯದ ಆಳವಾದ ಸೌಹಾರ್ದವು ಪ್ರಕಟವಾಗುತ್ತದೆ ಎಂದು ಜಗದ್ಗುರು ಲಿಯೋರವರು ಪುನರುಚ್ಚರಿಸಿದರು.

ಈ ಸಂದರ್ಭದಲ್ಲಿ, ಸತ್ಯವು ಮಾನವನಿಗಿಂತ ಮೊದಲು ಇರುವ, ಅವನನ್ನು ಪ್ರಶ್ನಿಸುವ ಮತ್ತು ತನ್ನೊಳಗಿಂದ ಹೊರಬರಲು ಆಹ್ವಾನಿಸುವ ವಾಸ್ತವಿಕತೆಯಾಗಿದೆ ಎಂದು ಅವರು ವಿವರಿಸಿದರು. ಆದ್ದರಿಂದ, ಸತ್ಯವನ್ನು ವಿಶ್ವಾಸದಿಂದ ಹುಡುಕಬಹುದು.

“ನಂಬಿಕೆ ಈ ಹುಡುಕಾಟದಿಂದ ದೂರವಾಗುವುದಿಲ್ಲ,” ಅವರು ಹೇಳಿದರು, “ಅದು ಸ್ವಯಂಸಮರ್ಪಕತೆಯಿಂದ ಅದನ್ನು ಶುದ್ಧಗೊಳಿಸುತ್ತದೆ ಮತ್ತು ಯುಕ್ತಿಯು ಸಂಪೂರ್ಣವಾಗಿ ಹಿಡಿಯಲು ಸಾಧ್ಯವಿಲ್ಲದಿದ್ದರೂ ಅದನ್ನು ಪೂರ್ಣತೆಗೆ ತೆರೆದಿಡುತ್ತದೆ.”

ಈ ರೀತಿಯಾಗಿ, ಶಿಲುಬೆಯ ಮರವು ಜ್ಞಾನ ಪ್ರೀತಿಯ ಮೂಲ ಉದ್ದೇಶವನ್ನು ಮರುಸ್ಥಾಪಿಸುತ್ತದೆ ಮತ್ತು ತಿಳಿದುಕೊಳ್ಳುವುದು ಎಂದರೆ ಸತ್ಯಕ್ಕೆ ತೆರೆದಿರಬೇಕು—ಅದರ ಅರ್ಥವನ್ನೂ ಅದರೊಳಗಿನ ರಹಸ್ಯವನ್ನೂ ಗ್ರಹಿಸುವುದಾಗಿದೆ ಎಂದು ಅವರು ಹೇಳಿದರು.

“ಹೀಗಾಗಿ, ಸತ್ಯದ ಹುಡುಕಾಟ ನಿಜವಾಗಿಯೂ ಮಾನವೀಯವಾಗಿರುತ್ತದೆ ವಿನಮ್ರ, ಗಂಭೀರ ಮತ್ತು ನಮಗಿಂತ ಮೊದಲು ಇರುವ, ನಮ್ಮನ್ನು ಕರೆಯುವ ಮತ್ತು ನಮ್ಮನ್ನು ಮೀರುವ ಸತ್ಯದ ಕಡೆ ತೆರೆದಿರುವುದಾಗಿದೆ.

ಸತ್ಯದಿಂದ ಆಳವಾಗಿ ರೂಪುಗೊಂಡ ತಲೆಮಾರುಗಳು

ಜಗದ್ಗುರುಗಳು ಮತ್ತೊಮ್ಮೆ ಹೇಳಿದರು, ಕೇವಲ ಫಲ ನೀಡುವ ಮರ ಸಾಕಾಗುವುದಿಲ್ಲ ಅದರ ಗುಣಮಟ್ಟವೂ ಮಹತ್ವದ್ದಾಗಿದೆ.

ಈ ಭಾವನೆಯೊಂದಿಗೆ, ಶಿಕ್ಷಣ ಕ್ಷೇತ್ರದಲ್ಲಿ ಶತಮಾನಗಳ ಬದ್ಧತೆಯ ಭಾಗವಾಗಿ ಧರ್ಮ ಸಭೆಯ “ಸತ್ಯವಾದ ಆಸೆ”ಯನ್ನು ಅವರು ಪುನರುಚ್ಚರಿಸಿದರು: “ಹೊಸ ತಲೆಮಾರುಗಳು ಸಮಗ್ರವಾಗಿ ರೂಪುಗೊಳ್ಳಬೇಕು.”

“ಪುರುಷರು ಮತ್ತು ಮಹಿಳೆಯರ ತಲೆಮಾರುಗಳು ಈ ಸ್ಥಳದಲ್ಲಿ ಸತ್ಯದಿಂದ ಆಳವಾಗಿ ರೂಪುಗೊಂಡು, ತಮ್ಮ ಜೀವನವನ್ನು ಇತರರಿಗಾಗಿ ಉಡುಗೊರೆಯಾಗಿ ಪರಿವರ್ತಿಸಲು ಸಮರ್ಥರಾದರೆ,” ಅವರು ಹೇಳಿದರು, “ಅಂದಾಗ ಸೀಬಾ ಮರವು ಈ ಭೂಮಿಯ ಅತ್ಯುತ್ತಮ ಮೌಲ್ಯಗಳಲ್ಲಿ ಬೇರುಬಿಟ್ಟಿರುವ, ಜ್ಞಾನದಿಂದ ಎತ್ತರಕ್ಕೆ ಏರಿದ ಮತ್ತು ಇಕ್ವೇಟೋರಿಯಲ್ ಗಿನಿಯಾಗೆ ಗೌರವ ತರುವ ಫಲಗಳಿಂದ ಸಮೃದ್ಧವಾಗಿರುವ ಒಂದು ಪ್ರಭಾವಶಾಲಿ ಸಂಕೇತವಾಗಿ ಉಳಿಯುತ್ತದೆ ಇದು ಸಂಪೂರ್ಣ ಮಾನವಕುಲವನ್ನೂ ಸಮೃದ್ಧಗೊಳಿಸುತ್ತದೆ”ಎಂದರು.

21 ಏಪ್ರಿಲ್ 2026, 20:37