ಹುಡುಕಿ

Il Papa, basta guerre con i loro cumuli di morti

ಜಗದ್ಗರುಗಳ ರ ಮಾರ್ಚ್ ತಿಂಗಳ ಪ್ರಾರ್ಥನಾ ಉದ್ದೇಶ: ‘ನಿರಾಯುಧೀಕರಣ ಮತ್ತು ಶಾಂತಿಗಾಗಿ’

ಜಗದ್ಗುರು XIVನೇ ಲಿಯೋರವರು ಮಾರ್ಚ್ ತಿಂಗಳಿಗಾಗಿ ತಮ್ಮ ಪ್ರಾರ್ಥನಾ ಉದ್ದೇಶವನ್ನು ಪ್ರಕಟಿಸಿ, ‘ನಿರಾಯುಧೀಕರಣ ಮತ್ತು ಶಾಂತಿಗಾಗಿ’ ತಮ್ಮೊಡನೆ ಪ್ರಾರ್ಥಿಸಲು ಕಥೋಲಿಕರನ್ನು ಆಹ್ವಾನಿಸಿದ್ದಾರೆ. ಹಾಗೆಯೇ, “ಅಣ್ವಸ್ತ್ರಗಳ ಭೀತಿ ಮತ್ತೆ ಎಂದಿಗೂ ಮಾನವಕುಲದ ಭವಿಷ್ಯವನ್ನು ನಿರ್ಧರಿಸದಿರಲಿ ಎಂದು ಅವರು ಪ್ರಾರ್ಥಿಸಿದ್ದಾರೆ

ವ್ಯಾಟಿಕನ್ ವರದಿ 

ಜಗದ್ಗುರು  XIV ನೇ ಲಿಯೋರವರು ಮಾರ್ಚ್ ತಿಂಗಳ ಮಾಸಿಕ ಪ್ರಾರ್ಥನಾ ಉದ್ದೇಶ “ನಿರಾಯುಧೀಕರಣ ಮತ್ತು ಶಾಂತಿಗಾಗಿ” ಎಂಬುದಾಗಿದೆ.ಈ ತಿಂಗಳ ಜಗದ್ಗುರುಗಳ ವಿಡಿಯೋ ಮೂಲಕ ಜಗದ್ಗುರುಗಳು ಈ ಉದ್ದೇಶಕ್ಕಾಗಿ ಪ್ರಾರ್ಥಿಸಲು ಧರ್ಮ ಸಭೆಯನ್ನು ಆಹ್ವಾನಿಸಿದ್ದಾರೆ. ಈ ಪ್ರಾರ್ಥನಾ ಉದ್ದೇಶವನ್ನು ಸಂಪೂರ್ಣ ಕಥೋಲಿಕ ಧರ್ಮ ಸಭೆಗೆ ಜಗದ್ಗುರುಗಳ ವಿಶ್ವವ್ಯಾಪಿ ಪ್ರಾರ್ಥನಾ ಜಾಲ ಮೂಲಕ ಒಪ್ಪಿಸಲಾಗಿದೆ.

ಜಗದ್ಗುರು ಲಿಯೋರವರು  ತಮ್ಮ ಪ್ರಾರ್ಥನೆಯನ್ನು ಆರಂಭಿಸುವಾಗ, ಪ್ರಭು  ಪ್ರತಿಯೊಬ್ಬ ಮಾನವನನ್ನೂ ತನ್ನ ಸ್ವರೂಪ ಮತ್ತು ಸದೃಶ್ಯದಲ್ಲಿ ರೂಪಿಸಿದ್ದಾನೆ ಎಂದು ನೆನಪಿಸಿದರು. ದೇವರು ನಮ್ಮನ್ನು ಯುದ್ಧಕ್ಕಾಗಿ ಅಲ್ಲ, ಐಕ್ಯತೆಯಿಗಾಗಿ,ನಾಶಕ್ಕಾಗಿ ಅಲ್ಲ, ಸಹೋದರತ್ವಕ್ಕಾಗಿ ಸೃಷ್ಟಿಸಿದ್ದಾನೆ ಎಂದು ಅವರು ಹೇಳಿದರು.

ನಿಜವಾದ ಭದ್ರತೆ ಮತ್ತು ಶಾಂತಿಯ ವರ

“ನಿಮಗೆ ಶಾಂತಿ ಇರಲಿ” ಎಂದು ತನ್ನ ಶಿಷ್ಯರಿಗೆ ವಂದನೆ ಮಾಡಿದ ಪ್ರಭವೆ , ನಮಗೆ ನಿನ್ನ ಶಾಂತಿಯ ವರವನ್ನು ನೀಡಿ, ಅದನ್ನು ಇತಿಹಾಸದಲ್ಲಿ ನಿಜವಾಗಿಸುವ ಶಕ್ತಿಯನ್ನು ಅನುಗ್ರಹಿಸು ಎಂದು ಜಗದ್ಗುರುಗಳು ಪ್ರಾರ್ಥಿಸಿದರು.

ಇಂದು,” ಎಂದು ಜಗದ್ಗುರು ಲಿಯೋ ಹೇಳಿದರು, ನಾವು ವಿಶ್ವದಲ್ಲಿ ಶಾಂತಿಗಾಗಿ ಪ್ರಾರ್ಥಿಸುತ್ತಿದ್ದೇವೆ ರಾಷ್ಟ್ರಗಳು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಸಂವಾದ ಮತ್ತು ರಾಜತಾಂತ್ರಿಕತೆಯ ಮಾರ್ಗವನ್ನು ಆಯ್ಕೆ ಮಾಡಲಿ ಎಂದು ಬೇಡಿಕೊಳ್ಳುತ್ತೇವೆ.

ಅವರು ಪ್ರಭುವನ್ನು ಪ್ರಾರ್ಥಿಸಿ, ದ್ವೇಷ, ಅಸಮಾಧಾನ ಮತ್ತು ನಿರ್ಲಕ್ಷ್ಯದಿಂದ ನಮ್ಮ ಹೃದಯಗಳನ್ನು ನಿರಾಯುಧಗೊಳಿಸು,ಎಂದು ಬೇಡಿಕೊಂಡರು, ಹಾಗಾಗಿ ನಾವು ಸಮಾಧಾನದ ಸಾಧನಗಳಾಗುವಂತೆ ಆಗಲಿ ಎಂದರು.

ನಿಜವಾದ ಭದ್ರತೆ, ಎಂದು ಅವರು ಒತ್ತಿಹೇಳಿದರು, ಭಯದಿಂದ ಉಂಟಾಗುವ ನಿಯಂತ್ರಣದಿಂದ ಬರುವುದಲ್ಲ ಅದು ಜನಾಂಗಗಳ ನಡುವಿನ ನಂಬಿಕೆ, ನ್ಯಾಯ ಮತ್ತು ಐಕ್ಯತೆಗಳಿಂದ ಬರುತ್ತದೆ ಎಂದರು 

ಅಣ್ವಸ್ತ್ರ ಭೀತಿ ಮತ್ತೆ ಮಾನವಕುಲದ ಭವಿಷ್ಯವನ್ನು ನಿರ್ಧರಿಸದಿರಲಿ

ಜಗದ್ಗರುಗಳು ಮತ್ತಷ್ಟು ಪ್ರಾರ್ಥಿಸಿ, ಪ್ರಭು ರಾಷ್ಟ್ರಗಳ ನಾಯಕರನ್ನು ಪ್ರಜ್ಞಾವಂತರನ್ನಾಗಿ ಮಾಡಲಿ, ಅವರು ಮರಣದ ಯೋಜನೆಗಳನ್ನು ತ್ಯಜಿಸುವ ಧೈರ್ಯ ಹೊಂದಿ, ಶಸ್ತ್ರಾಸ್ತ್ರ ಸ್ಪರ್ಧೆಯನ್ನು ನಿಲ್ಲಿಸಿ, ಅತ್ಯಂತ ದುರ್ಬಲರ ಜೀವವನ್ನು ಕೇಂದ್ರದಲ್ಲಿರಿಸಲಿ ಎಂದು ಬೇಡಿಕೊಂಡರು.

“ಅಣ್ವಸ್ತ್ರಗಳ ಭೀತಿ ಮತ್ತೆ ಎಂದಿಗೂ ಮಾನವಕುಲದ ಭವಿಷ್ಯವನ್ನು ನಿರ್ಧರಿಸದಿರಲಿ,” ಎಂದು ಅವರು ಹೇಳಿದರು.

ಪವಿತ್ರಾತ್ಮನು ನಮ್ಮ ಸಮುದಾಯಗಳಲ್ಲಿ, ಕುಟುಂಬಗಳಲ್ಲಿ, ನಗರಗಳಲ್ಲಿ ಮತ್ತು ನಮ್ಮ ಹೃದಯಗಳಲ್ಲಿ ಪ್ರತಿದಿನದ ಶಾಂತಿಯ ವಿಶ್ವಾಸಾರ್ಹ ಮತ್ತು ಸೃಜನಾತ್ಮಕ ನಿರ್ಮಾಪಕರಾಗುವಂತೆ ಮಾಡಲಿ ಎಂದು ಜಗದ್ಗುರುಗಳು ಪ್ರಾರ್ಥಿಸಿದರು.

ಕೊನೆಯಲ್ಲಿ, ಪ್ರತಿಯೊಂದು ಸದುಪಯೋಗದ ಮಾತು, ಪ್ರತಿಯೊಂದು ಸಮಾಧಾನದ ಸಂಕೇತ, ಮತ್ತು ಸಂವಾದವನ್ನು ಆಯ್ಕೆ ಮಾಡುವ ಪ್ರತಿಯೊಂದು ನಿರ್ಧಾರವೂ ಹೊಸ ಲೋಕದ ಬೀಜಗಳಾಗಲಿ ಎಂದು ಅವರು ಪ್ರಾರ್ಥಿಸಿದರು.

ಜಗದ್ಗರುಗಳ ವೀಡಿಯೊ

ಜಗದ್ಗರುಗಳ ವಿಡಿಯೋ, ಜಗದ್ಗುರುಗಳ ಮಾಸಿಕ ಪ್ರಾರ್ಥನಾ ಉದ್ದೇಶಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡುವ ಉದ್ದೇಶ ಹೊಂದಿರುವ ಅಧಿಕೃತ ಜಾಗತಿಕ ಉಪಕ್ರಮವಾಗಿದೆ. ಇದನ್ನು  ಜಗದ್ಗುರುಗಳ ವಿಶ್ವವ್ಯಾಪಿ ಪ್ರಾರ್ಥನಾ ಜಾಲ (ಅಪೋಸ್ತಲತ್ವ ಆಫ್ ಪ್ರೇಯರ್) ನಡೆಸುತ್ತದೆ.

2016ರಿಂದ ಈ ವರೆಗೆ, ಜಗದ್ಗುರುಗಳ ವಿಡಿಯೋ ವ್ಯಾಟಿಕನ್‌ನ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ 247 ಮಿಲಿಯನ್‌ಕ್ಕಿಂತ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಇದು 23ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿದ್ದು, 114 ದೇಶಗಳಲ್ಲಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಈ ವೀಡಿಯೊವನ್ನು ಜಗದ್ಗುರುಗಳ ವಿಶ್ವವ್ಯಾಪಿ ಪ್ರಾರ್ಥನಾ ಜಾಲ ತಂಡವು ನಿರ್ಮಿಸಿದ್ದು, ಇದನ್ನು ಆಂಡ್ರಿಯಾ ಸರುಬ್ಬಿ ಸಂಯೋಜಿಸಿದ್ದಾರೆ. ವೀಡಿಯೊವನ್ನು ಪಟ್ಟಾಭಿಷೇಕ ಮಾಧ್ಯಮ ಸಹಾಯದಿಂದ ಸೃಷ್ಟಿಸಲಾಗಿದ್ದು, ಲಾ ಮಾಚಿ ಸಂಸ್ಥೆಯ ಸಹಾಯದಿಂದ ಮತ್ತು ವ್ಯಾಟಿಕನ್ ನ್ಯೂಸ್ ಸಹಯೋಗದೊಂದಿಗೆ ವಿತರಿಸಲಾಗಿದೆ.

ಜಗದ್ಗರುಗಳು ವಿಶ್ವವ್ಯಾಪಿ ಪ್ರಾರ್ಥನಾ ಜಾಲ ಒಂದು ಜಗದ್ಗುರುಗಳಿಗೆ ಸಂಬಂಧಿತ ಸಂಘವಾಗಿದ್ದು, ಮಾನವಕುಲ ಎದುರಿಸುತ್ತಿರುವ ಸವಾಲುಗಳು ಮತ್ತು ಧರ್ಮ ಸಭೆಯ ಧ್ಯೇಯಕ್ಕೆ ಪ್ರತಿಕ್ರಿಯೆಯಾಗಿ ಪ್ರಾರ್ಥನೆ ಮತ್ತು ಕ್ರಿಯೆಯ ಮೂಲಕ ಕಥೋಲಿಕರನ್ನು ಪ್ರೇರೇಪಿಸುವುದು ಇದರ ಗುರಿಯಾಗಿದೆ.

05 ಮಾರ್ಚ್ 2026, 15:54