ಹುಡುಕಿ

ಗಾಜಾದ ಅವಶೇಷಗಳ ನಡುವೆ ಮಕ್ಕಳು ಗಾಜಾದ ಅವಶೇಷಗಳ ನಡುವೆ ಮಕ್ಕಳು  (AFP or licensors)

“ಯುದ್ಧದ ಭೀಕರತೆಯಲ್ಲಿ ಕಣ್ಮರೆಯಾಗಿರುವ ಮಕ್ಕಳ ಕಣ್ಣುಗಳು ನಮ್ಮನ್ನು ಪರಿವರ್ತಿಸಲಿ.”

ಜಗದ್ಗುರು ಲಿಯೋರವರು ಮಕ್ಕಳಿಗೆ ಸಮರ್ಪಿತವಾದ ಇಟಾಲಿಯನ್ ವಾರಪತ್ರಿಕೆಯ ಪೂರಕವಾದ ಪೋಪೋಟಸ್ ಇದರ 30ನೇ ವಾರ್ಷಿಕೋತ್ಸವದ ಅಂಗವಾಗಿ ಒಂದು ಪತ್ರವನ್ನು ಬರೆಯುತ್ತಾರೆ. ಮತ್ತು ನಾವು ಮಾನವರಾಗಿಯೇ ಉಳಿಯಲು ಎಲ್ಲರೂ ವಾಸ್ತವಿಕತೆಯನ್ನು ಮಕ್ಕಳಂತಹ ದೃಷ್ಟಿಯಿಂದ ನೋಡುವ ಮನೋಭಾವವನ್ನು ಕಾಪಾಡಿಕೊಳ್ಳುವಂತೆ ಆಹ್ವಾನಿಸುತ್ತಾರೆ.

ವ್ಯಾಟಿಕನ್ ವರದಿ

ಮಾನವಕೋಟಿಯ ಭವಿಷ್ಯವನ್ನು ಅಪಾಯಕ್ಕೆ ಒಳಪಡಿಸುವ ಯುದ್ಧಗಳ ಬಗ್ಗೆ ತೀವ್ರ ಚಿಂತೆಯಿರುವ ಈ ದಿನಗಳಲ್ಲಿ, ನಾವು ಮಕ್ಕಳ ಕಡೆ ನೋಡಬೇಕು, ಏಕೆಂದರೆ ಅವರ ಕಣ್ಮರೆಯಾಗಿರುವ ಕಣ್ಣುಗಳು ನಿಜವಾದ ಪರಿವರ್ತನೆಯತ್ತ ನಮ್ಮನ್ನು ನಡೆಸಬಹುದು ಎಂದು ಜಗದ್ಗುರು XIVನೇ ಲಿಯೋರವರು ಇಟಾಲಿಯನ್ ಬಿಷಪ್‌ಗಳ ಮಹಾಸಭೆಯ ಪತ್ರಿಕೆ ಅವ್ವೆನಿರೆಯ ಭಾಗವಾಗಿರುವ ಮಕ್ಕಳಿಗೆ ಸಮರ್ಪಿತ ವಾರಪತ್ರಿಕೆಯ ಪೂರಕ ಪೋಪೋಟಸ್ನ ಓದುಗರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ನಾವು ಸಹ ಮತ್ತೆ ಸ್ವಲ್ಪ ಮಕ್ಕಳಂತಾಗಬೇಕು; ಶುದ್ಧ ಕಣ್ಣುಗಳೊಂದಿಗೆ ವಾಸ್ತವಿಕತೆಯನ್ನು ನೋಡುವ ಮನೋಭಾವವನ್ನು ಹೊಂದಿ ಮಾನವರಾಗಿಯೇ ಉಳಿಯಬೇಕು ಎಂದು ಜಗದ್ಗುರುಗಳು ಮುಂದುವರಿಸಿದರು.

ಪೋಪೋಟಸ್ ತನ್ನ ಮೊದಲ ಸಂಚಿಕೆ 1996ರ ಮಾರ್ಚ್ 23ರಂದು ಪ್ರಕಟವಾದುದರಿಂದ ಈಗ 30ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.

ಡಿಜಿಟಲ್ ಯುಗ ಮತ್ತು ಕೃತಕ ಬುದ್ಧಿಮತ್ತೆಯ ಅಪಾಯಗಳು

ಅವ್ವೆನಿರೆ ಪತ್ರಿಕೆಯ ನಿರ್ದೇಶಕ ಮಾರ್ಕೋ ಗಿರಾರ್ಡೋರವರಿಗೆ ಉದ್ದೇಶಿಸಿ ಬರೆದ ಪತ್ರದಲ್ಲಿ, ಮಕ್ಕಳಿಗೆ ಸಮಕಾಲೀನ ಘಟನೆಗಳನ್ನು ಹಂಚಿಕೊಳ್ಳುವ ಕಾರ್ಯಕ್ಕಾಗಿ ಜಗದ್ಗುರುಗಳು ಆ ಮಾಧ್ಯಮವನ್ನು ಕೃತಜ್ಞತೆಯಿಂದ ಸ್ಮರಿಸಿದರು ನಮ್ಮನ್ನು ಉತ್ತೇಜಿಸುವ ಸುವಾರ್ತೆ ಸುದ್ದಿಗಳೂ, ನಾವು ಅದೇ ತಪ್ಪುಗಳನ್ನು ಪುನರಾವರ್ತಿಸದಂತೆ ಕಲಿಸುವ ದುಃಖಕರ ಸುದ್ದಿಗಳೂ ಆಗಿದೆ ಎಂದರು.

ಇಂದಿನ ಕಾಲಘಟ್ಟವನ್ನು ಗಮನದಲ್ಲಿಟ್ಟುಕೊಂಡು, ಪೋಷಕರು ಮತ್ತು ಶಿಕ್ಷಕರು ಮಕ್ಕಳನ್ನು ಮಾನವೀಯತೆಯನ್ನು ಕಳೆದುಕೊಳ್ಳುವ ಮಾಹಿತಿಯ ಹಾಗೂ ಶಿಕ್ಷಣದ ಕಲ್ಪನೆಗಳಿಂದ ರಕ್ಷಿಸಬೇಕು ಎಂದು ಅವರು ಕರೆ ನೀಡಿದರು.

ವಿಶೇಷವಾಗಿ ಇಂದಿನ ಡಿಜಿಟಲ್ ಯುಗದಲ್ಲಿ ಮತ್ತು ಕೃತಕ ಬುದ್ಧಿಮತ್ತೆಯ ಕಾಲದಲ್ಲಿ, ನಾವು ಎಲ್ಲರೂ ನಿರಂತರ ಶಿಕ್ಷಣದ ಅಗತ್ಯವಿದೆ. ಮತ್ತು ಮಾನವರಾಗಿಯೇ ಉಳಿಯಲು, ವಾಸ್ತವಿಕತೆಯನ್ನು ಮಕ್ಕಳಂತಹ ದೃಷ್ಟಿಯಿಂದ ನೋಡುವ ಮನೋಭಾವವನ್ನು ಕಾಪಾಡಿಕೊಳ್ಳಬೇಕು ಎಂದು ಜಗದ್ಗುರುಗಳು ಒತ್ತಿಹೇಳಿದರು.

ಮಕ್ಕಳು ಎಐ ಚಾಟ್‌ಗಳಲ್ಲಿ ತಮ್ಮ ಅತ್ಯುತ್ತಮ ಸ್ನೇಹಿತರನ್ನೋ ಅಥವಾ ಎಲ್ಲಾ ಜ್ಞಾನಗಳ ಮೂಲವನ್ನೋ ಕಂಡುಕೊಳ್ಳಬಹುದು ಎಂಬ ಭ್ರಮೆಗೆ ಒಳಗಾಗದಂತೆ ಎಚ್ಚರಿಕೆ ನೀಡಿದ ಅವರು, ಅದರಿಂದ ಅವರ ಬುದ್ಧಿಶಕ್ತಿಯೂ, ಸಂಬಂಧ ಬೆಳೆಸುವ ಸಾಮರ್ಥ್ಯವೂ ಕುಗ್ಗಿ, ಅವರ ಸೃಜನಶೀಲತೆ ಮತ್ತು ಚಿಂತನೆ ಮಂದಗೊಳ್ಳಬಹುದು ಎಂದು ಹೇಳಿದರು.

“ನಾವು ಅವರ ಬಾಲ್ಯವನ್ನು ಕಾಪಾಡಬೇಕು,” ಎಂದು ಜಗದ್ಗುರುಗಳು ಮನವಿ ಮಾಡಿದರು, ಮತ್ತು ಅವರ ಬೆಳವಣಿಗೆಯನ್ನು ಮಾರ್ಗದರ್ಶನ ಮಾಡಬೇಕು, ಹೀಗಾಗಿ ಅವರು ನವೀಕೃತ ಜಗತ್ತಿನ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುವವರಾಗಲಿ ಎಂದು ಹೇಳಿದರು.

ಜಗತ್ತಿಗೆ ಸೌಂದರ್ಯವನ್ನು ಮರಳಿ ತರುವುದು

ನಂತರ ಜಗದ್ಗುರುಗಳು ಯುವ ಓದುಗರನ್ನು ಉದ್ದೇಶಿಸಿ, ಜಗತ್ತಿಗೆ ಸೌಂದರ್ಯವನ್ನು ಮರಳಿ ತರುವುದು ಸಾಧ್ಯವೇ ಸರಿ ಎಂದು ಭರವಸೆ ನೀಡಿದರು.

ನಿಮಗಾಗಿ ಸೃಷ್ಟಿಸಲಾದ ಈ ಪತ್ರಿಕೆಯ ಮೂಲಕ, ನೀವು ವಯಸ್ಕರಿಗೆ ಅದನ್ನು ಹೊಸ ಆಶ್ಚರ್ಯದಿಂದ ಕಾಣಲು ಸಹಾಯ ಮಾಡಬಹುದು ಅದರ ಕೃಪೆಯನ್ನು ಅರಿಯಲು, ವಿಶ್ವಾಸದಿಂದ ಅದನ್ನು ಚಿಂತಿಸಲು ಮತ್ತು ಪೂರ್ವಾಗ್ರಹವಿಲ್ಲದೆ ಅದನ್ನು ನಿರ್ಮಿಸಲು, ಎಂದು ಜಗದ್ಗುರುಗಳು ಹೇಳಿದರು.

“ನೀವು ಬೆಳೆದಂತೆ,” ಎಂದು ಅವರು ಮುಂದುವರಿಸಿದರು, “ನೀವು ಹೊಸ ಹೊಸ ವಿಷಯಗಳನ್ನು ಕಂಡುಹಿಡಿದು, ಸ್ವತಃ ಹೊಸದನ್ನು ರಚಿಸುವಿರಿ ಆದರೆ ನಿಮ್ಮ ಜೀವನದ ಈ ಆರಂಭಿಕ ವರ್ಷಗಳಿಂದ ಯಾವಾಗಲೂ ಉಳಿಸಿಕೊಳ್ಳಬೇಕಾದ ಕೆಲವು ವಿಷಯಗಳಿವೆ ನಿಮ್ಮನ್ನು ಪ್ರೀತಿಸುವವರ ಮೇಲೆ ನಂಬಿಕೆ, ಪ್ರೀತಿಯ ವಿಶ್ವವ್ಯಾಪಿ ಭಾಷೆ, ನಗುವಿನ ಮೃದು ಶಕ್ತಿ, ‘ಕ್ಷಮಿಸಿ’ ಎಂದು ಹೇಳುವ ಧೈರ್ಯ, ಶಾಂತಿ ಸಾಧಿಸುವ ಸೌಂದರ್ಯ ಎಂಬುದಾಗಿ ತಿಳಿಸಿದರು.

ಶುದ್ಧ ಕಣ್ಣುಗಳ ದೃಷ್ಟಿ

ಜಗದ್ಗರುಗಳು ಯೇಸು ತನ್ನ ಶಿಷ್ಯರಿಗೆ ಹೇಳಿದ ಮಾತುಗಳನ್ನು ಸಹ ಸ್ಮರಿಸಿದರು ನೀವು ತಿರುಗಿ ಮಕ್ಕಳಂತಾಗದಿದ್ದರೆ, ಸ್ವರ್ಗರಾಜ್ಯಕ್ಕೆ ಪ್ರವೇಶಿಸುವುದಿಲ್ಲ.

ಈ ಸಂದೇಶ ಇಂದಿಗೂ ಪ್ರಸ್ತುತವಾಗಿದೆ ಎಂದು ಜಗದ್ಗುರುಗಳು ಒತ್ತಿಹೇಳಿದರು “ಮಕ್ಕಳಂತಾಗುವುದು ಹಿಂದಕ್ಕೆ ಹೋಗುವುದಲ್ಲ ಅದು ಪ್ರತಿಯೊಂದರ ಸಾರವನ್ನು ನೋಡುವ ಕೀಲಿಯನ್ನು ಉಳಿಸಿಕೊಳ್ಳುವುದಾಗಿದೆ ಅತಿ ಕಠಿಣ ಪ್ರಶ್ನೆಗಳಿಗೆ ಸಹ ಆಶ್ಚರ್ಯಕರ ಉತ್ತರಗಳನ್ನು ಕಂಡುಹಿಡಿಯುವ ಸಾಮರ್ಥ್ಯ ಹೊಂದಿದೆ ಎಂದರು.

ಯುದ್ಧದ ಕ್ರೌರ್ಯದ ಎದುರು ಮಕ್ಕಳ ಕಣ್ಮರೆಯಾಗಿರುವ ಕಣ್ಣುಗಳನ್ನು ನೋಡುವ ಮೂಲಕವೇ ನಾವು ಪರಿವರ್ತಿತರಾಗಬಹುದು, ಎಂದು ಅವರು ಬರೆದರು. ಮತ್ತೆ ಒಬ್ಬರ ಕಣ್ಣುಗಳಲ್ಲಿ ಮತ್ತೊಬ್ಬರು ನೋಡುವುದನ್ನು ಕಲಿಯುವುದು ಮತ್ತು ಜಗತ್ತನ್ನು ಶುದ್ಧ ಕಣ್ಣುಗಳಿಂದ ನೋಡುವುದನ್ನು ಮರುಕಳಿಸುವುದು ಅಗತ್ಯವಿದೆ ಎಂದರು.

ಕೊನೆಯಲ್ಲಿ, ಪೋಷಕರು ಮತ್ತು ಶಿಕ್ಷಕರು ತಮ್ಮ ಯುವ ಪ್ರಯಾಣ ಸಂಗಾತಿಗಳನ್ನು ಶಿಕ್ಷಣ ನೀಡುವಲ್ಲಿ ತೋರಿಸುವ ಪೋಷಣೆ ಮತ್ತು ಪ್ರೀತಿಗಾಗಿ ಜಗದ್ಗುರುಗಳು ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಮಕ್ಕಳೊಳಗಿನ ಸೌಂದರ್ಯವನ್ನು ಹೊರತೆಗೆಯಲು ಮತ್ತು ಅದನ್ನು ಹೊಸ ಹೊಸ ರೀತಿಯಲ್ಲಿ ವ್ಯಕ್ತಪಡಿಸಲು ಇತಿಹಾಸ, ಸ್ಮೃತಿ ಮತ್ತು ಜೀವನದೊಂದಿಗೆ ಸಂಬಂಧ ಬೆಳೆಸುತ್ತಾ, ದೇವರಿಂದ ದೊರೆತ ಪ್ರತಿಯೊಬ್ಬರ ವೈಶಿಷ್ಟ್ಯತೆಯ ಪ್ರಕಾರ—ಅವರಿಗೆ ಸಹಾಯ ಮಾಡಲು ಅವರು ಆಹ್ವಾನಿಸಿದರು.

22 ಮಾರ್ಚ್ 2026, 21:24