ಜಗದ್ಗುರು: ಇರಾನ್ ವಿಷಯದಲ್ಲಿ — ಶಾಂತಿ ಪರಸ್ಪರ ಬೆದರಿಕೆಗಳಲ್ಲ ಅಥವಾ ಮಾರಕಾಸ್ತ್ರಗಳೊಂದಿಗೆ ನಿರ್ಮಿಸಲಾಗುವುದಿಲ್ಲ
ವ್ಯಾಟಿಕನ್ ವರದಿ
ಭಾನುವಾರದ ತ್ರಿಕಾಲ ಪ್ರಾರ್ಥನೆಯ ವೇಳೆ ಮಾತನಾಡಿದ ಜಗದ್ಗುರು XIVನೇ ಲಿಯೋರವರು, ಮಧ್ಯ ಪೂರ್ವ ಮತ್ತು ಇರಾನ್ನಲ್ಲಿ ಇತ್ತೀಚೆಗೆ ನಡೆದ ಘಟನೆಗಳ ಕುರಿತು ಗಾಢ ಚಿಂತೆಯನ್ನು ವ್ಯಕ್ತಪಡಿಸಿದರು.
ಸ್ಥಿರತೆ ಮತ್ತು ಶಾಂತಿ ಪರಸ್ಪರ ಬೆದರಿಕೆಗಳ ಮೂಲಕವೂ ಅಲ್ಲ, ನಾಶ, ನೋವು ಮತ್ತು ಮರಣವನ್ನು ಬಿತ್ತುವ ಶಸ್ತ್ರಾಸ್ತ್ರಗಳ ಮೂಲಕವೂ ಅಲ್ಲ ಅವು ವಿವೇಕಪೂರ್ಣ, ನೈಜ ಮತ್ತು ಹೊಣೆಗಾರಿಕೆಯಿಂದ ಸಂವಾದದ ಮೂಲಕವೇ ನಿರ್ಮಾಣವಾಗುತ್ತವೆ,ಎಂದು ಅವರು ಹೇಳಿದರು.
ಹಿಂಸಾಚಾರ ನಿಯಂತ್ರಣ ತಪ್ಪಿದರೆ ಭಾರೀ ದುರಂತ ಉಂಟಾಗುವ ಸಾಧ್ಯತೆಯಿದೆ ಎಂದು ಜಗದ್ಗುರುಗಳು ಎಚ್ಚರಿಸಿದರು.
ಅತಿದೊಡ್ಡ ಪ್ರಮಾಣದ ದುರಂತ ಸಂಭವಿಸುವ ಸಾಧ್ಯತೆಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ, ಎಂದು ಅವರು ಹೇಳಿದರು, ಪಾಲ್ಗೊಂಡಿರುವ ಎಲ್ಲಾ ಪಕ್ಷಗಳಿಗೆ ನಾನು ಹೃತ್ಪೂರ್ವಕ ಮನವಿಯನ್ನು ಸಲ್ಲಿಸುತ್ತೇನೆ ಹಿಂಸಾಚಾರದ ಸುತ್ತುಮುತ್ತು ನಿಯಂತ್ರಣ ತಪ್ಪಿ ಮರಳಲಾಗದ ಅಂತರಾಳವಾಗುವ ಮೊದಲು ಅದನ್ನು ನಿಲ್ಲಿಸುವ ನೈತಿಕ ಹೊಣೆಗಾರಿಕೆಯನ್ನು ಸ್ವೀಕರಿಸಿರಿ
ರಾಷ್ಟ್ರಗಳು ಶಾಂತಿಯನ್ನು ಹುಡುಕುವ ಉದ್ದೇಶದಿಂದ ಸಂವಾದದ ಮಾರ್ಗಕ್ಕೆ ಮರಳಲಿ ಎಂದು ಜಗದ್ಗುರು ಲಿಯೋರವರು ಪ್ರಾರ್ಥಿಸಿದರು.
ರಾಜತಾಂತ್ರಿಕತೆ ತನ್ನ ಪಾತ್ರವನ್ನು ಮರುಪಡೆಯಲಿ ನ್ಯಾಯದ ಆಧಾರದ ಮೇಲೆ ಶಾಂತಿಯುತ ಸಹವಾಸವನ್ನು ಹಾರೈಸುವ ಜನಾಂಗಗಳ ಹಿತವನ್ನು ಉತ್ತೇಜಿಸಲಿ, ಎಂದು ಅವರು ಹೇಳಿದರು. ಮತ್ತು ನಾವು ಶಾಂತಿಗಾಗಿ ಪ್ರಾರ್ಥನೆಯನ್ನು ಮುಂದುವರಿಸೋಣ ಎಂದರು.
ಶನಿವಾರ, ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿ ಟೆಹ್ರಾನ್ ಹಾಗೂ ಇನ್ನೂ ಹಲವು ಇರಾನ್ ನಗರಗಳ ಮೇಲೆ ಸಂಯುಕ್ತ ಹವಾಯ್ದಾಳೆಗಳನ್ನು ಆರಂಭಿಸಿತು.
ಅದಕ್ಕೆ ಪ್ರತಿಯಾಗಿ ಇಸ್ರೇಲ್ ಮತ್ತು ಅಮೆರಿಕದ ಸೈನಿಕ ತಾಣಗಳನ್ನು ಹೊಂದಿರುವ ಹಲವಾರು ಗಲ್ಫ್ ರಾಷ್ಟ್ರಗಳ ಮೇಲೆ ದಾಳಿಗಳನ್ನು ನಡೆಸಿತು.
ದಿನದ ನಂತರ, ಸರ್ಕಾರಿ ನಿಯಂತ್ರಣದಲ್ಲಿರುವ ಸುದ್ದಿ ಸಂಸ್ಥೆಗಳು ಸುಮಾರು 37 ವರ್ಷಗಳ ಕಾಲ ಇರಾನ್ ಅನ್ನು ಆಡಳಿತ ನಡೆಸಿದ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅವರ ನಿಧನವನ್ನು ಘೋಷಿಸಿತು.
