ಸಾಮಾನ್ಯ ಸಭೆಯಲ್ಲಿ ಜಗದ್ಗುರು XIV ನೇ ಲಿಯೋರವರು ಸಾಮಾನ್ಯ ಸಭೆಯಲ್ಲಿ ಜಗದ್ಗುರು XIV ನೇ ಲಿಯೋರವರು  (ANSA)

ಜಗದ್ಗುರು ಲಿಯೋರವರು: ಯುದ್ಧದ ಹುಚ್ಚಾಟದ ನಡುವೆ, ಜೀವನದ ಪ್ರತಿಯೊಂದು ಹಂತವನ್ನೂ ನಾವು ರಕ್ಷಿಸಬೇಕು

ನಮ್ಮ ಪ್ರಭುವಿನ ಪ್ರಕಟಣೆಯ ಹಬ್ಬದೊಂದಿಗೆ ಹೊಂದಿಕೊಂಡಿರುವ ಪೋಲಂಡ್‌ನ ಜೀವನದ ಪವಿತ್ರತೆ ದಿನದ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ಯುದ್ಧದ ಹುಚ್ಚಾಟದಿಂದ ಗುರುತಿಸಲ್ಪಟ್ಟಿರುವ ಈ ಕಾಲದಲ್ಲಿ, ಗರ್ಭಧಾರಣೆಯಿಂದ ಹಿಡಿದು ಸಹಜ ಅಂತ್ಯದವರೆಗೆ ಜೀವನವನ್ನು ರಕ್ಷಿಸಬೇಕು ಎಂದು ಒತ್ತಿಹೇಳಿದರು.

ವ್ಯಾಟಿಕನ್ ವರದಿ

“ಯುದ್ಧದ ಹುಚ್ಚಾಟದಿಂದ ಗುರುತಿಸಲ್ಪಟ್ಟಿರುವ ಈ ಕಾಲದಲ್ಲಿ, ಗರ್ಭಧಾರಣೆಯಿಂದ ಹಿಡಿದು ಸಹಜ ಅಂತ್ಯದವರೆಗೆ ಜೀವನವನ್ನು ರಕ್ಷಿಸುವುದು ಅತ್ಯಂತ ಮುಖ್ಯವಾಗಿದೆ.”

ಜಗದ್ಗುರು ಲಿಯೋರವರು ಇಂದು ವ್ಯಾಟಿಕನ್‌ನಲ್ಲಿ ನಡೆದ ಬುಧವಾರದ ಸಾಮಾನ್ಯ ಸಭೆಯಲ್ಲಿ, ಪೋಲಿಷ್ ಭಾಷಾಭಿಮಾನಿ ಭಕ್ತರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಈ ಮಾತುಗಳನ್ನು ಹೇಳಿದರು. ಅವರು ಪೋಲಂಡ್‌ನ ಜೀವನದ ಪವಿತ್ರತೆ ದಿನವನ್ನು ಸ್ಮರಿಸಿದರು.

ಪೋಲಂಡ್‌ನಲ್ಲಿ ಈ ದಿನವನ್ನು ಪ್ರತಿವರ್ಷ ಮಾರ್ಚ್ 25ರಂದು ಆಚರಿಸಲಾಗುತ್ತದೆ. ಇದು 2004ರಲ್ಲಿ ಸ್ಥಾಪಿತವಾಗಿದ್ದು, ಧರ್ಮ ಸಭೆಯ ಪ್ರಕಟಣೆಯ ಹಬ್ಬದೊಂದಿಗೆ ಹೊಂದಿಕೆಯಾಗುತ್ತದೆ.

ಫ್ರೆಂಚ್ ಭಾಷಾಭಿಮಾನಿ ಭಕ್ತರೊಂದಿಗೆ ಮಾತನಾಡುವ ವೇಳೆ, ಜಗದ್ಗುರುಗಳು ಧರ್ಮ ಸಭೆಯ ಧರ್ಮಾಧ್ಯಕ್ಷೀಯರು ಉತ್ಸಾಹದಿಂದ ಸುವಾರ್ತೆಯನ್ನು ಸಾರಬೇಕು ಮತ್ತು ಕ್ರೈಸ್ತರು ಶಾಂತಿಯ ಲೋಕವನ್ನು ನಿರ್ಮಿಸಲು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಹಾಯ ಮಾಡಬೇಕು ಎಂದು ಹೇಳಿದರು.

ಈ ಆಹ್ವಾನವನ್ನು ಎಲ್ಲ ಭಕ್ತರಿಗೆ ವಿಸ್ತರಿಸಿ, ಅರಬಿಕ್ ಭಾಷಾಭಿಮಾನಿಗಳಿಗೆ ಪ್ರತಿ ಕ್ರೈಸ್ತನು ಪ್ರೀತಿಯಿಂದ ತುಂಬಿದ ಶಿಷ್ಯನಾಗಿದ್ದು, ಜಗತ್ತಿನಾದ್ಯಂತ ಸುವಾರ್ತೆಯನ್ನು ಸಾರುವ ಧೈರ್ಯಶಾಲಿ ಸಂದೇಶವಾಹಕರಾಗಿರಬೇಕು ಎಂದು ನೆನಪಿಸಿದರು.

ಕೊನೆಗೆ, ಇಂದಿನ ಪ್ರಭುವಿನ ಪ್ರಕಟಣೆಯ ಮಹೋತ್ಸವವನ್ನು ಸ್ಮರಿಸುತ್ತಾ, ಪವಿತ್ರ ಕನ್ಯಾ ಮರಿಯಮ್ಮನವರ ಉದಾಹರಣೆಯನ್ನು ಅನುಸರಿಸಿ, ದೇವರ ಇಚ್ಛೆಯನ್ನು ಯಾವಾಗಲೂ ನೆರವೇರಿಸಲು ಸಿದ್ಧರಾಗಿರಲು ಈ ದಿನ ಎಲ್ಲರಿಗೂ ಆಹ್ವಾನವಾಗಲಿ ಎಂದು ಜಗದ್ಗುರುಗಳು ಪ್ರಾರ್ಥಿಸಿದರು.

25 ಮಾರ್ಚ್ 2026, 09:32