ಉಕ್ರೇನ್ನಲ್ಲಿ ಯುದ್ಧ: ಮಾಲ್ಟಾ ಆದೇಶದ ಮಾನವೀಯ ಬೆಂಬಲವನ್ನು ಖಚಿತಪಡಿಸಿಕೊಳ್ಳುವುದನ್ನು ಮುಂದುವರೆಸಿದೆ
ಸ್ಟೀಫನ್ ವಾನ್ ಕೆಂಪಿಸ್
ಯುದ್ಧದಿಂದ ಇನ್ನೂ ಧ್ವಂಸಗೊಂಡಿರುವ ಅಥವಾ ವಿವಿಧ ರೀತಿಯ ಪರಿಣಾಮಗಳನ್ನು ಎದುರುಸುತ್ತಿರುವ ದೇಶದಲ್ಲಿ, "ಜನರಿಗೆ ಸಹಾಯ ಮಾಡಬೇಕಾಗಿದೆ ಮತ್ತು ದೈಹಿಕ ಸವಾಲುಗಳನ್ನು ಎದುರಿಸಲು ಸಮರ್ಥರನ್ನಾಗಿ ಮಾಡಬೇಕು, ಉದಾಹರಣೆಗೆ ತೀವ್ರವಾಗಿ ಗಾಯಗೊಂಡ ಸೈನಿಕರ ಕ್ಷೇಮವನ್ನು ವಿಚಾರಿಸಲು, ಮಾಲ್ಟಾದ ಗ್ರ್ಯಾಂಡ್ ಹಾಸ್ಪಿಟಲರ್ ಉಕ್ರೇನ್ಗೆ ನಾಲ್ಕು ದಿನಗಳ ಭೇಟಿಯನ್ನು ಮುಕ್ತಾಯಗೊಳಿಸುತ್ತಾ, ಯುದ್ಧಪೀಡಿತ ರಾಷ್ಟ್ರಕ್ಕೆ ಪರಿಣಾಮಕಾರಿ ಮತ್ತು ಸಂಘಟಿತ ಮಾನವೀಯ ಬೆಂಬಲವನ್ನು ಖಚಿತಪಡಿಸಿಕೊಳ್ಳುವುದನ್ನು ಮುಂದುವರಿಸುವ ಭರವಸೆಯನ್ನು ನೀಡಿದರು.
ವ್ಯಾಟಿಕನ್ ಸುದ್ಧಿಯವರೊಂದಿಗೆ ಮಾತನಾಡಿದ ಜೋಸೆಫ್ ಡಿ. ಬ್ಲಾಟ್ಜ್ ರವರು, ಆದೇಶದಿಂದ ಬೆಂಬಲಿತ ಮತ್ತು ಉತ್ತೇಜಿಸಲ್ಪಟ್ಟ ಅನೇಕ ವಿಭಿನ್ನ ಮಾನವೀಯ ಯೋಜನೆಗಳಿಗೆ ತಮ್ಮ ಭೇಟಿಯ ಬಗ್ಗೆ ಮಾತನಾಡಿದರು, ಇದು ಅಂತರರಾಷ್ಟ್ರೀಯ ಮಾಲ್ಟೀಸರ್ ಸಹಯೋಗದೊಂದಿಗೆ ಉಕ್ರೇನ್ನ ಮಾಲ್ಟೀಸರ್ ಪರಿಹಾರ ಸೇವೆಯ ಸಿಬ್ಬಂದಿ ಮತ್ತು ಸ್ವಯಂಸೇವಕರ ಬದ್ಧತೆಯಿಂದ ಈ ಕಾರ್ಯವು ಸಾಧ್ಯವಾಯಿತು ಎಂದು ಹೇಳಿದರು.
ಪ್ರಶ್ನೆ: ಡಾಕ್ಟರ್ ಬ್ಲಾಟ್ಜ್ ರವರು, ನೀವು ಮಾಲ್ಟಾದ ಸಾರ್ವಭೌಮ ಆದೇಶದ ಪರವಾಗಿ ಉಕ್ರೇನ್ಗೆ ಭೇಟಿ ನೀಡುತ್ತಿದ್ದೀರಿ ಮತ್ತು ಇಲ್ಲಿ ಅನೇಕ ಮಾಲ್ಟೀಸ್ ಯೋಜನೆಗಳನ್ನು ನೋಡಿದ್ದೀರಿ. ನಿಮ್ಮ ಮುಖ್ಯ ಅನಿಸಿಕೆಗಳೇನು?
ಮೊದಲನೆಯದಾಗಿ, ಕಳೆದ ಎರಡು ದಿನಗಳಿಂದ ನಾನು ಸಂಗ್ರಹಿಸಿದ ಅನಿಸಿಕೆಗಳ ಬಗ್ಗೆ ಸ್ವಲ್ಪ ಚಿಂತಿಸಲು ಅವಕಾಶ ನೀಡಿದ್ದಕ್ಕಾಗಿ ತುಂಬಾ ಧನ್ಯವಾದಗಳು. ಅಲ್ಲಿ ಹಲವಾರು ಚಿತ್ರಗಳು, ಹಲವಾರು ಮಾತುಕತೆಗಳು ಮತ್ತು ಸಭೆಗಳು ಇದ್ದವು - ಸಂಕ್ಷಿಪ್ತವಾಗಿ ಹೇಳುವುದು ಅಸಾಧ್ಯ. ನಿಮಗೆ ಗೊತ್ತಾ, ಈ ಎಲ್ಲಾ ಘಟನೆಗಳು ಮತ್ತು ಸಭೆಗಳ ಮುಂದೆ ಬಳಲುತ್ತಿರುವ ಜನರು, ಸಂತ್ರಸ್ತರುಗಳು ಅಥವಾ ಸಂಬಂಧಿಕರೊಂದಿಗೆ ಸಂಭಾಷಿಸುವಾಗ ಮೂಕನಾಗಿದ್ದೇನೆ. ಇದು ನನಗೆ ಒಂದು ಉತ್ತಮ ಅವಕಾಶ ಮತ್ತು ಇದು ವಾಸ್ತವವಾಗಿ ನನ್ನ ಕಾರ್ಯಕ್ರಮಗಳ ಪ್ರಮುಖ ಭಾಗವಾಗಿದೆ, ವಿಶ್ವದಾದ್ಯಂತದ ಮಾಲ್ಟಾದ ಆದೇಶದ ಸದಸ್ಯರು ಮತ್ತು ಸ್ವಯಂಸೇವಕರನ್ನು ಭೇಟಿ ಮಾಡಲು, ಅವರಿಗೆ ಧನ್ಯವಾದ ಹೇಳುವುದು, ಗುರುತಿಸುವುದು, ಅವರ ಕೆಲಸವನ್ನು ಗುರುತಿಸುವುದು, ಅವರನ್ನು ಪ್ರೋತ್ಸಾಹಿಸುವುದು, ಚಟುವಟಿಕೆಗಳನ್ನು ಸಂಘಟಿಸುವುದು ಇದರ ಕಾರ್ಯವಾಗಿದೆ.
ಉಕ್ರೇನ್ನಲ್ಲಿ ನಾನು ನೋಡಿದ್ದು, ಮೊದಲನೆಯದಾಗಿ, ಮುಖ್ಯವಾಗಿ ಸ್ವಯಂಸೇವಕರು ನಡೆಸುವ ಮಾಲ್ಟಾ ಆದೇಶದ ಚಟುವಟಿಕೆಗಳು ಈಗಾಗಲೇ ಉತ್ತಮವಾಗಿ ಸಂಘಟಿತವಾಗಿವೆ. ಅವರುಾ ಕಾರ್ಯದಲ್ಲಿ ಬಹಳ ಯಶಸ್ವಿಯಾಗಿದ್ದಾರೆ, ಬಹಳ ದಕ್ಷರಾಗಿದ್ದಾರೆ, ಬಹಳ ಅನುಭವಿಗಳಾಗಿದ್ದಾರೆ . ಏಕೆಂದರೆ ನಾವು ಈಗಾಗಲೇ 34 ವರ್ಷಗಳಿಂದ ಇಲ್ಲಿದ್ದೇವೆ ಮತ್ತು ಈ ದೇಶದಾದ್ಯಂತ 73 ವಿಭಿನ್ನ ಸ್ಥಳಗಳಲ್ಲಿ ದೃಢವಾದ ಯೋಜನೆಗಳಲ್ಲಿ ಈಗ ಸಹಾಯ ಮಾಡಲು ಇದು ಅತ್ಯಂತ ಪ್ರಮುಖ ಪೂರ್ವಾಪೇಕ್ಷಿತ ಕಾರ್ಯಗಳಲ್ಲಿ ಒಂದಾಗಿದೆ.
ಪ್ರಶ್ನೆ: ಯುದ್ಧ ಪ್ರಾರಂಭವಾದಾಗ, ನೀವು ಹೇಳಿದಂತೆ 91 ರಿಂದ ಆರ್ಡರ್ ಆಫ್ ಮಾಲ್ಟಾ ಉಕ್ರೇನ್ನಲ್ಲಿತ್ತು. ವಿಮಾನದಲ್ಲಿ ಕರೆದೊಯ್ಯುವ ಅಗತ್ಯವಿರಲಿಲ್ಲ, ಆದರೆ ನೀವು ಈಗಾಗಲೇ ಈ ನಾಡಿನಲ್ಲಿರುವುದು ಇದ್ದಿದ್ದು ನಿಮಗೆ ಹೇಗೆ ಸಹಾಯ ಮಾಡಿತು?
ಹೌದು, ನಾವು ಈಗಾಗಲೇ ಈ ಸ್ಥಳದಲ್ಲಿರುವುದು ಮತ್ತು ಇದು ವಿಶ್ವದಾದ್ಯಂತದ ನಮ್ಮ ಚಟುವಟಿಕೆಗಳಿಗೆ ಪ್ರಮುಖ ತತ್ವಗಳಲ್ಲಿ ಒಂದಾಗಿದೆ. ನಾವು ಹೆಚ್ಚಾಗಿ ಆಸಕ್ತಿ ಹೊಂದಿರುವುದು ಸುಸ್ಥಿರ ರಚನೆಗಳನ್ನು ರಚಿಸುವುದು, ಇದರಿಂದಾಗಿ ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ, ಉದಾಹರಣೆಗೆ ಭೂಕಂಪ, ನಾವು ತಕ್ಷಣ ಕಾರ್ಯನಿರ್ವಹಿಸಬಹುದಾಗಿತ್ತು. ಸರ್ಕಾರಿ ಸಂಸ್ಥೆಗಳು, ಧರ್ಮಸಭೆ ಮತ್ತು ಇತರ ಪಾಲುದಾರರಿಂದ ನಾವು ಈಗಾಗಲೇ ಉತ್ತಮ ಖ್ಯಾತಿಯನ್ನು ಗಳಿಸಿದ್ದೇವೆ ಮತ್ತು ಆದ್ದರಿಂದ ನಾವು 2022 ರಿಂದ ಮತ್ತು ಅದಕ್ಕೂ ಮುಂಚೆಯೇ ಈಗ ಏನು ಮಾಡಬೇಕೆಂದು ಬಹಳ ನಿರ್ದಿಷ್ಟವಾಗಿ ಹೇಳಲು ಸಾಧ್ಯವಾಯಿತು.